ಕಾಮಾಕ್ಯ ದೇಗುಲಕ್ಕೆ ಅಂಬಾನಿ ದಂಪತಿಯಿಂದ 19 ಕೆ ಜಿ ಚಿನ್ನ ದಾನ!

ಅಸ್ಸಾಂನ ಕಾಮಾಕ್ಯ ದೇವಿ ದೇಗುಲಕ್ಕೆ ರಿಲೆಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ದಂಪತಿ ಭಾರಿ ಪ್ರಮಾಣ ಚಿನ್ನ ದೇಣಿಗೆಯಾಗಿ ನೀಡಿದ್ದಾರೆ. ದೇಗುಲ ಗೋಪುರದ ಮೂರು ಕಲಶಗಳ ನಿರ್ಮಾಣಕ್ಕಾಗಿ 19 ಕೆ.ಜಿ ಚಿನ್ನ ದಾನ ಮಾಡಿದ್ದಾರೆ.
ಕಾಮಾಕ್ಯ ದೇಗುಲಕ್ಕೆ ಅಂಬಾನಿ ದಂಪತಿಯಿಂದ 19 ಕೆ ಜಿ ಚಿನ್ನ ದಾನ!
ಕಾಮಾಕ್ಯ ದೇಗುಲಕ್ಕೆ ಅಂಬಾನಿ ದಂಪತಿಯಿಂದ 19 ಕೆ ಜಿ ಚಿನ್ನ ದಾನ!

ಗುವಾಹಟಿ: ಅಸ್ಸಾಂನ ಕಾಮಾಕ್ಯ ದೇವಿ ದೇಗುಲಕ್ಕೆ ರಿಲೆಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ದಂಪತಿ ಭಾರಿ ಪ್ರಮಾಣ ಚಿನ್ನ ದೇಣಿಗೆಯಾಗಿ ನೀಡಿದ್ದಾರೆ. ದೇಗುಲ ಗೋಪುರದ ಮೂರು ಕಲಶಗಳ ನಿರ್ಮಾಣಕ್ಕಾಗಿ 19 ಕೆ.ಜಿ ಚಿನ್ನ ದಾನ ಮಾಡಿದ್ದಾರೆ.

ಈ ಚಿನ್ನದಿಂದ ಗೋಪುದ ಮೂರು ಕಲಶಗಳನ್ನು ನಿರ್ಮಿಸಲಾಗುತ್ತಿದೆ. ಮೂರು ತಿಂಗಳ ಹಿಂದೆ ಕಾಮಾಕ್ಯ  ದೇಗುಲಕ್ಕೆ ಚಿನ್ನ ದಾನ ಮಾಡುವುದಾಗಿ ಅಂಬಾನಿ ದಂಪತಿ  ವಾಗ್ದಾನ ಮಾಡಿದ್ದರು ಎಂದು ಕಾಮಾಕ್ಯ ದೇಗುಲದ   ಮೂಲಗಳು ಹೇಳಿವೆ. ಗೋಪುರದ ಮೂರು ಕಲಶಗಳ  ನಿರ್ಮಾಣ ವೆಚ್ಚವನ್ನು ತಾವೇ ಭರಿಸುವುದಾಗಿ ಅಂಬಾನಿ  ಹೇಳಿದ್ದರು. 

ವಾಗ್ದಾನದಂತೆ, ರಿಲೆಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪರವಾಗಿ ಚಿನ್ನ ನೀಡಲಾಗಿದೆ. ಕಲಶಗಳ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿದ್ದು, ನಿರ್ಮಾಣ ಕಾರ್ಯದಲ್ಲಿ ಶಿಲ್ಪಿಗಳ ಜೊತೆಗೆ ರಿಲೆಯನ್ಸ್ ಎಂಜಿನಿಯರ್‌ಗಳು ಸಹ ಭಾಗಿಯಾಗಿದ್ದಾರೆ. 

ಈ ಕಲಶಗಳ ನಿರ್ಮಾಣ ಪೂರ್ಣಗೊಂಡ ನಂತರ ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಕಾಮಾಕ್ಯ ಅಮ್ಮನವರ  ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ದೇಶದ ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಾಲಯ ಅಸ್ಸಾಂನ ನೀಲಾಚಲ ಪರ್ವತಗಳಲ್ಲಿದ್ದು, ದೇಶಾದ್ಯಂತದ ಪ್ರತಿವರ್ಷ ಲಕ್ಷಾಂತರ  ಭಕ್ತರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com