ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿಲ್ಲ: ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಹಾರ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದವೇಳೆ ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದಾರೆನ್ನಲಾದ ವರದಿಗಳ ಕುರಿತು ಜೆಡಿಎಸ್ ಮುಖಂಡ ನಿತೀಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. 
ನಿತೀಶ್ ಕುಮಾರ್
ನಿತೀಶ್ ಕುಮಾರ್

ಪಾಟ್ನಾ: ಬಿಹಾರ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದವೇಳೆ ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದಾರೆನ್ನಲಾದ ವರದಿಗಳ ಕುರಿತು ಜೆಡಿಎಸ್ ಮುಖಂಡ ನಿತೀಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. 

ನಾನೆಂದಿಗೂ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿಯೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಪ್ರತಿ ಬಾರಿ ಕೊನೆಯ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಹೇಳಿವಂತೆಯೇ ಈ ಬಾರಿಯೂ ಎಲ್ಲವೂ ಚೆನ್ನಾಗಿದ್ದರೆ, ಅಂತ್ಯವೂ ಚೆನ್ನಾಗಿರುತ್ತದೆ (ಅಂತ್ ಭಲಾ ತೋ ಸಬ್ ಭಲಾ) ಎಂದು ಹೇಳಿದ್ದೆ ಎಂದು ಹೇಳಿದ್ದಾರೆ. 

ಈ ಹೇಳಿಕೆಗೂ ಮುನ್ನ ನಾನು ನೀಡಿದ್ದ ಕೆಲ ಹೇಳಿಕೆಗಳನ್ನು ಸಂಪೂರ್ಣವಾಗಿ ಕೇಳಿದರೆ ಇಡೀ ಚಿತ್ರಣ ನಿಮಗೆ ಅರ್ಥವಾಗುತ್ತದೆ. ನೀವು ಹಾಗೆ ಮಾಡಿದಿದ್ದರೆ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. 

ಈ ಹಿಂದೆ ನಿತೀಶ್ ಅವರು ಯೇ ಮೇರಾ ಆಖಿರಿ ಚುನಾವ್ ಹೈ ಎಂಬ ಹೇಳಿಕೆಯನ್ನು ವಿರೋಧ ಪಕ್ಷಗಳು ಕೊನೆಯ ಚುನಾವಣೆ ಅರ್ಥೈಸಿಕೊಂಡಿದ್ದವು. 

ಬಳಿಕ ಸ್ಪಷ್ಟನೆ ನೀಡಿದ್ದ ಜೆಡಿಯು ನಿತೀಶ್ ಅವರು ಕೊನೆಯ ಚುನಾವಣೆ ಎಂದು ಹೇಳಿಲ್ಲ. ಕೊನೆಯ ಚುನಾವಣಾ ಸಭೆ ಎಂದು ಹೇಳಿದ್ದರು. ರಾಜಕೀಯ ನಿವೃತ್ತಿ ಬಗ್ಗೆ ನಿತೀಶ್ ಅವರು ಮಾತನಾಡಿಲ್ಲ ಎಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com