ಮೂರು ರಾಜ್ಯಗಳ ಉಸ್ತುವಾರಿ ಹೊಣೆ: ಸಿಟಿ ರವಿಗೆ ಅಣ್ಣಾಮಲೈ ಶುಭ ಹಾರೈಕೆ
ಮೂರು ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಮಾಜಿ ಐಪಿಎಸ್ ಅಣ್ಣಾಮಲೈ ಅವರು ಶುಭ ಕೋರಿದ್ದಾರೆ.
Published: 14th November 2020 04:17 PM | Last Updated: 14th November 2020 05:18 PM | A+A A-

ಸಿ.ಟಿ. ರವಿ, ಅಣ್ಣಾಮಲೈ
ಚೆನ್ನೈ: ಮೂರು ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಮಾಜಿ ಐಪಿಎಸ್ ಅಣ್ಣಾಮಲೈ ಅವರು ಶುಭ ಕೋರಿದ್ದಾರೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿ ಸಿಟಿ ರವಿ ಆಯ್ಕೆಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡುವ ಮೂಲಕ ಅಣ್ಣಾ ಮಲೈ ಅಭಿನಂದನೆ ಸಲ್ಲಿಸಿದ್ದಾರೆ. ಸಿಟಿ ರವಿ ಅವರ ಬದ್ಧತೆ, ಕಠಿಣ ಪರಿಶ್ರಮ ಮತ್ತು ಸಾಬೀತಾದ ನಾಯಕತ್ವ ಕೌಶಲ್ಯದಿಂದ ತಮಿಳುನಾಡಿನಲ್ಲಿ ಬಿಜೆಪಿ ಅರಳುತ್ತದೆ ಎಂದು ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Wishing the very best to Shri C T Ravi @CTRavi_BJP avaru for being appointed as the state in charges for @BJP4TamilNadu @BJP4Maharashtra @BJP4Goa
— K.Annamalai (@annamalai_k) November 14, 2020
With his commitment,hard-work and proven leadership skills, தாமரை will bloom in Tamil Nadu! @Murugan_TNBJP @blsanthosh @JPNadda pic.twitter.com/4hxzmIu7pq