ಪ್ರೀತಿಯ ನಾಯಿಯ ಸಾವಿನ ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾದ ಮಹಿಳೆ!

ಪ್ರೀತಿಯ ನಾಯಿ ಸಾವನ್ನಪ್ಪಿತು ಎಂದು ಅದರ ನೋವಿನಿಂದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಘಡದಲ್ಲಿ ನಡೆದಿದೆ.
ಆತ್ಮಹತ್ಯೆ
ಆತ್ಮಹತ್ಯೆ

ರಾಯ್ ಘಡ: ಪ್ರೀತಿಯ ನಾಯಿ ಸಾವನ್ನಪ್ಪಿತು ಎಂದು ಅದರ ನೋವಿನಿಂದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಘಡದಲ್ಲಿ ನಡೆದಿದೆ.

ಛತ್ತೀಘಡದ ರಾಯ್ ಘಡದಲ್ಲಿ ಈ ಘಟನೆ ನಡೆದಿದ್ದು, ಸಾಕಿ ಸಲುಹಿದ ನಾಯಿ ಸಾವನ್ನಪ್ಪಿತು ಎಂಬ ನೋವಿನಿಂದ 21 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಪೊಲೀಸ್ ಮೂಲಗಳ ಪ್ರಕಾರ ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು 21 ವರ್ಷ ಪ್ರಿಯಾಂಶು ಸಿಂಗ್ ಎಂದು ಹೇಳಲಾಗಿದೆ. ಪ್ರಿಯಾಂಶು ಸಿಂಗ್ ಸ್ನಾತಕೋತ್ತರ ಪದವೀದರಳಾಗಿದ್ದು, ತನ್ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. 

ಕೊತ್ರಾ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೂರ್ಖಾ ಪ್ರದೇಶದ ತನ್ನ ಮನೆಯ ಮೇಲ್ಛಾವಣಿಯಲ್ಲಿ ಕಬ್ಬಿಣದ ಪೈಪ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಿಯಾಂಶು ಸಿಂಗ್ ಅವರ ಮೃತ ದೇಹ ಪತ್ತೆಯಾಗಿದೆ ಎಂದು ಕೊತ್ರಾ ರಸ್ತೆ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ)  ಚಮನ್ ಸಿನ್ಹಾ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಅನಾರೋಗ್ಯಕ್ಕೆ ತುತ್ತಾದ ತನ್ನ ನಾಲ್ಕು ವರ್ಷದ ನಾಯಿಯ ಸಾವಿನ ಬಗ್ಗೆ ಸಿಂಗ್ ನೋವಿನಿಂದ ಇದ್ದರು. ಅದೇ ನೋವಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ನಿನ್ನೆಯಷ್ಟೇ ಪ್ರಿಯಾಂಶು ಅವರ ನಾಯಿ ಸಾವನ್ನಪ್ಪಿತ್ತು, ಅದರ ಬೆನ್ನಲ್ಲೇ ಪ್ರಿಯಾಂಶು ಕೂಡ ಇಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದನ್ನು ವಶಕ್ಕೆ  ಪಡೆದಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com