ಅಮಿತ್ ಶಾ ಅವರ ಬುಡಕಟ್ಟು ಕಾರ್ಯಕ್ರಮ ತೋರಿಕೆಯಷ್ಟೇ, ಸ್ಟಾರ್ ಹೊಟೇಲ್ ನಿಂದ ಆಹಾರ ತಯಾರಿ: ಮಮತಾ ಬ್ಯಾನರ್ಜಿ 

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಅವರು ಬುಡಕಟ್ಟು ಮನೆಗಳಿಗೆ ಭೇಟಿ ನೀಡಿರುವುದು ಕೇವಲ ತೋರಿಕೆಗಷ್ಟೇ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಅವರು ಬುಡಕಟ್ಟು ಮನೆಗಳಿಗೆ ಭೇಟಿ ನೀಡಿರುವುದು ಕೇವಲ ತೋರಿಕೆಗಷ್ಟೇ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಬಂಕುರಾದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಅಮಿತ್ ಶಾ ಅವರದ್ದು ಕೇವಲ ತೋರಿಕೆಯ ಕಾರ್ಯಕ್ರಮವಷ್ಟೇ, ಬುಡಕಟ್ಟು ಮನೆಗಳಿಗೆ ಭೇಟಿ ನೀಡಿದ ಅವರಿಗೆ ಆಹಾರವನ್ನು ಪಂಚತಾರಾ ಹೋಟೆಲ್ ನಿಂದ ತರಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಇನ್ನು ಬುಡಕಟ್ಟು ಯೋಧನೊಬ್ಬನ ಪ್ರತಿಮೆಯನ್ನು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಪುತ್ಥಳಿ ಎಂದು ತಪ್ಪಾಗಿ ಭಾವಿಸಿರುವುದಕ್ಕೂ ಅಮಿತ್ ಶಾ ಅವರ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ. ಇತ್ತ ಸಿಎಂ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಮತಾ ಬ್ಯಾನರ್ಜಿ ಅವರು ತಮ್ಮ ಹೇಳಿಕೆಗಳನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com