ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಯೋಜಿಸಿದ್ದ ನಾಲ್ವರು ಕಾಶ್ಮೀರಿ ಯುವಕರ ಬಂಧನ!

ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದ್ದ ನಾಲ್ಕು ಕಾಶ್ಮೀರಿ ಯುವಕರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರ ವಿಶೇಷ ಸೆಲ್ ತಿಳಿಸಿದೆ.
ದೆಹಲಿ ಪೊಲೀಸರು
ದೆಹಲಿ ಪೊಲೀಸರು

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದ್ದ ನಾಲ್ಕು ಕಾಶ್ಮೀರಿ ಯುವಕರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರ ವಿಶೇಷ ಸೆಲ್ ತಿಳಿಸಿದೆ.

ಕೇಂದ್ರ ದೆಹಲಿಯ ಐಟಿಒ ಪ್ರದೇಶದಿಂದ ಆರೋಪಿಗಳನ್ನು ಬಂಧಿಸಲಾಗಿದ್ದು ಅವರ ಬಳಿಯಿದ್ದ ನಾಲ್ಕು ಅತ್ಯಾಧುನಿಕ ಪಿಸ್ತೂಲ್ ಮತ್ತು 120ಕ್ಕೂ ಹೆಚ್ಚು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳನ್ನು ಪುಲ್ವಾಮಾ ನಿವಾಸಿ ಅಲ್ತಾಫ್ ಅಹ್ಮದ್ ದಾರ್(25), ಶೋಪಿಯಾನ್ ನಿವಾಸಿಗಳಾದ ಮುಷ್ತಾಕ್ ಅಹ್ಮದ್ ಗಣಿ(27), ಇಷ್ಫಾಕ್ ಮಜೀದ್ ಕೋಕಾ(28) ಮತ್ತು ಅಕಿಬ್ ಸಫಿ(22) ಎಂದು ಗುರುತಿಸಲಾಗಿದೆ. 

"ಇಶ್ಫಾಕ್ ಮಜೀದ್ ಕೋಕಾ ಹತ್ಯೆಗೀಡಾದ ಭಯೋತ್ಪಾದಕ ಬುರ್ಹಾನ್ ಕೋಕಾನ ಹಿರಿಯ ಸಹೋದರ, ಅನ್ಸಾರ್ ಘಜ್ವತ್ ಉಲ್ ಹಿಂದ್ ಮಾಜಿ ಮುಖ್ಯಸ್ಥ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com