'ರಾಷ್ಟ್ರಪತಿಗಳೊಂದಿಗೆ ಮಾತಾಡುತ್ತಿದ್ದೇನೆ ಎಂಬುದನ್ನೇ ಪ್ರಣಬ್ ಮುಖರ್ಜಿ ಮರೆಸುತ್ತಿದ್ದರು'

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್ ಭಾಗವತ್, ಪ್ರಣಬ್ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ.
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್ ಭಾಗವತ್, ಪ್ರಣಬ್ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ.

ಪ್ರಣಬ್ ನಿಧನದಿಂದಾಗಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಶೂನ್ಯ ಭಾವನೆ ಆವರಿಸಿದೆ ಎಂದಿರುವ ಮೋಹನ್ ಭಾಗವತ್, ಅವರ ವ್ಯಕ್ತಿತ್ವವೇ ನಮಗೆಲ್ಲಾ ಮಾರ್ಗದರ್ಶನ ಮಾಡುತ್ತಿತ್ತು ಎಂದು ಹೇಳಿದ್ದಾರೆ.

ಪ್ರಣಬ್ ಅತ್ಯಂತ ಸೌಮ್ಯ ಸ್ವಭಾವದ ಆತ್ಮೀಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಹೇಳಿರುವ ಮೋಹನ್ ಭಾಗವತ್, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಅವರು ನಮ್ಮನ್ನು ಭೇಟಿ ಮಾಡುತ್ತಿದ್ದ ರೀತಿ ಅನನ್ಯ ಎಂದು ಹೇಳಿದ್ದಾರೆ.

ಪ್ರಣಬ್ ಮುಖರ್ಜಿ ತಮ್ಮನ್ನು ಅದೆಷ್ಟು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು ಎಂದರೆ, ತಾವು ರಾಷ್ಟ್ರಪತಿಗಳೊಂದಿಗೆ ಮಾತನಾಡುತ್ತಿರುವುದನ್ನೇ ಅವರು ಮರೆಸಿ ಬಿಡುತ್ತಿದ್ದರು ಎಂದು ಭಾಗವತ್ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ.

ಪ್ರಣಬ್ ಅವರನ್ನು ಭೇಟಿಯಾದಾಗಲೆಲ್ಲಾ ಅವರೊಟ್ಟಿಗೆ ಮಾತನಾಡಲು ಹಲವು ವಿಷಯಗಳಿರುತ್ತಿದ್ದವು. ಮಾತನಾಡುತ್ತಾ ಮಾತನಾಡುತ್ತಾ ನಾವು ಅದೆಷ್ಟು ಆತ್ಮೀಯರಾಗಿ ಬಿಡುತ್ತಿದ್ದೇವು ಎಂದರೆ ಅವರು ರಾಷ್ಟ್ರಪತಿಗಳು ಎಂಬುದೇ ನನಗೆ ಮರೆತು ಹೋಗುತ್ತಿತ್ತು ಎಂದು ಭಾಗವತ್ ವಿವರಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷಗಳ ಜೊತೆ ಅವರು ಎಂದು ರಾಜಕೀಯ ಅಸ್ಪೃಶ್ಯತೆ ತೋರಿರಲಿಲ್ಲ, ಎಲ್ಲಾ ಪಕ್ಷಗಳನ್ನು ಪ್ರಣಬ್ ಮಖರ್ಜಿ ಗೌರವಿಸುತ್ತಿದ್ದರು.  ಆರ್ ಎಸ್ ಎಸ್ ಪರಿವಾರದ ಮಾರ್ಗ ದರ್ಶಕರಾಗಿದ್ದರು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com