ಭೂ ವಿವಾದ: ಮಾಜಿ ಶಾಸಕನ ಕೊಚ್ಚಿ ಭೀಕರ ಕೊಲೆ

ಉತ್ತರ ಪ್ರದೇಶದ ಈ ಜಿಲ್ಲೆಯ ಪಾಲಿಯಾ ಪ್ರದೇಶದಲ್ಲಿ ಭಾನುವಾರ ವಿವಾದಿತ ಜಮೀನೊಂದರಲ್ಲಿ ನಡೆದ ಘರ್ಷಣೆಯಲ್ಲಿ ಮಾಜಿ ಶಾಸಕರೊಬ್ಬರು ಸಾವನ್ನಪ್ಪಿದ್ದಾರೆ.
ನರ್ವೇಂದ್ರ ಕುಮಾರ್ ಮಿಶ್ರಾ
ನರ್ವೇಂದ್ರ ಕುಮಾರ್ ಮಿಶ್ರಾ

ಲಖಿಂಪುರ್ ಖೇರಿ: ಉತ್ತರ ಪ್ರದೇಶದ ಈ ಜಿಲ್ಲೆಯ ಪಾಲಿಯಾ ಪ್ರದೇಶದಲ್ಲಿ ಭಾನುವಾರ ವಿವಾದಿತ ಜಮೀನೊಂದರಲ್ಲಿ ನಡೆದ ಘರ್ಷಣೆಯಲ್ಲಿ ಮಾಜಿ ಶಾಸಕರೊಬ್ಬರು ಸಾವನ್ನಪ್ಪಿದ್ದಾರೆ. 

ಮೂರು ಬಾರಿಯ ಶಾಸಕ ನರ್ವೇಂದ್ರ ಕುಮಾರ್ ಮಿಶ್ರಾ ಘರ್ಷಣೆಯಲ್ಲಿ ಸಾವನ್ನಪ್ಪಿದ್ದರೆ, ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾನೆ.

ಸಂಪೂರ್ಣಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿಕೋಲಿಯಾ ಪಧುವಾ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಭೂಮಿಯನ್ನು ಕಬಳಿಸಲು ಕೆಲವರು ಮಾರಕಾಸ್ತ್ರಗಳೊಂದಿಗೆ ಬಂದಿದ್ದಾರೆ.

ಇದನ್ನು ವಿರೋಧಿಸಿದ ಮಾಜಿ ಶಾಸಕ ಮಿಶ್ರಾ, ಅವರ ಪುತ್ರ ಸಂಜೀವ್ ಮಿಶ್ರಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಭೂ ವಿವಾದದ ವಿಷಯವೂ ನ್ಯಾಯಾಲಯದಲ್ಲಿದೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com