ಕಂಗನಾ ರಾನಾವತ್ ಮಹಾರಾಷ್ಟ್ರ ಜನತೆ ಮುಂದೆ ಮೊದಲು ಕ್ಷಮೆ ಕೇಳಬೇಕು:ಸಂಜಯ್ ರಾವತ್

ಬಾಲಿವುಡ್ ನಟಿ ಕಂಗನಾ ರಾನಾವತ್ ಮಹಾರಾಷ್ಟ್ರ ಜನತೆ ಮುಂದೆ ಕ್ಷಮೆಯಾಚಿಸಿದರೆ ನಾನು ಕೂಡ ಆಕೆಯ ಕ್ಷಮೆ ಕೇಳುತ್ತೇನೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಸಂಜಯ್ ರಾವತ್(ಸಂಗ್ರಹ ಚಿತ್ರ)
ಸಂಜಯ್ ರಾವತ್(ಸಂಗ್ರಹ ಚಿತ್ರ)

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಮಹಾರಾಷ್ಟ್ರ ಜನತೆ ಮುಂದೆ ಕ್ಷಮೆಯಾಚಿಸಿದರೆ ನಾನು ಕೂಡ ಆಕೆಯ ಕ್ಷಮೆ ಕೇಳುತ್ತೇನೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ತಾವು ಕಂಗನಾ ಬಳಿ ಕ್ಷಮೆ ಕೇಳುತ್ತೀರಾ ಎಂದು ಕೇಳಿದ್ದಕ್ಕೆ ಸಂಸದ, ಆಕೆ ಮಹಾರಾಷ್ಟ್ರಿಗರ ಮುಂದೆ ಕ್ಷಮೆ ಕೇಳಿದರೆ ನಾನು ಮತ್ತೆ ಕ್ಷಮೆ ಕೇಳಲು ಯೋಚಿಸುತ್ತೇನೆ. ಆಕೆ ಮುಂಬೈಯನ್ನು ಮಿನಿ ಪಾಕಿಸ್ತಾನ ಎಂದು ಕರೆದಿದ್ದಾರೆ. ಹೀಗೆ ಅಹಮದಾಬಾದನ್ನು ಕೂಡ ಹೇಳಲು ಆಕೆಗೆ ಧೈರ್ಯವಿದೆಯೇ ಎಂದು ಸಂಜಯ್ ರಾವತ್ ಕೇಳಿದ್ದಾರೆ.

ಮೊನ್ನೆ ಗುರುವಾರ ನಟಿ ಕಂಗನಾ ಟ್ವಿಟ್ಟರ್ ನಲ್ಲಿ, ಸಂಜಯ್ ರಾವತ್ ಅವರು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದು ಮುಂಬೈಗೆ ಬರಬೇಡಿ ಎಂದು ಹೇಳಿದ್ದಾರೆ. ಮುಂಬೈ ನಗರಿಯಲ್ಲಿ ಸ್ವಾತಂತ್ರ್ಯ ಹತ್ತಿಕ್ಕಲು ನೋಡಿದ ನಂತರ ಇದೀಗ ಮುಕ್ತವಾಗಿ ಬೆದರಿಕೆ ಹಾಕುತ್ತಿದ್ದಾರೆ. ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಅನಿಸುತ್ತಿದೆ ಎಂದಿದ್ದರು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನಾನು ಮುಂಬೈಯ ಡ್ರಗ್ ಮಾಫಿಯಾ, ಚಲನ ಚಿತ್ರ ಮಾಫಿಯಾ ದಂಧೆ ಬಗ್ಗೆ ಮಾತನಾಡಿದ್ದೇನೆ, ನನಗೆ ಮುಂಬೈ ಪೊಲೀಸರ ಬಗ್ಗೆ ನಂಬಿಕೆಯಿಲ್ಲ. ತನ್ನನ್ನು ಸಾಯಿಸಲು ನೋಡುತ್ತಿದ್ದಾರೆ ಎಂದು ಎಂದು ಸುಶಾಂತ್ ಸಿಂಗ್ ಹೇಳಿದ್ದರೂ ಪೊಲೀಸರು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನನಗೆ ಅಸುರಕ್ಷತೆ ಎನಿಸಿದರೆ ಅದರರ್ಥ ಬಾಲಿವುಡ್, ಮುಂಬೈಯನ್ನು ದ್ವೇಷ ಮಾಡುತ್ತೇನೆಂದೇ ಎಂದು ಕಂಗನಾ ಟ್ವೀಟ್ ನಲ್ಲಿ ಕೇಳಿದ್ದರು.

ಇದಕ್ಕೆ ಉತ್ತರಿಸಿರುವ ಸಂಜಯ್ ರಾವತ್, ಮುಂಬೈ ಕಂಗನಾಗೆ ಸಾಕಷ್ಟು ಹೆಸರು, ಹಣ, ಕೀರ್ತಿಯನ್ನು ನೀಡಿದೆ, ಇಂದು ಮುಂಬೈ ಮತ್ತು ಮುಂಬೈ ಪೊಲೀಸರ ಹೆಸರು ಕೆಡಿಸಲು ಅವರು ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com