ಡೆಹ್ರಾಡೂನ್: ಪೋಷಕರ ಇಚ್ಚೆಗೆ ವಿರುದ್ಧವಾಗಿ ಮದುವೆಯಾಗಿದ್ದ ಯುವತಿ ಹಾಗೂ ಆಕೆಯ ಪತಿಯನ್ನು ಯುವತಿಯ ತಂದೆ ಹಾಗೂ ಸಹೋದರ ಸೇರಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಾಖಂಡ ಉಧಮ್ ಸಿಂಗ್ ನಗರ್ ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ ರಾತ್ರಿ ಜಿಲ್ಲೆಯ ಕಾಶಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೋಲೀಸರು ಹೇಳಿದ್ದಾರೆ.
ಮೃತರನ್ನು ನಾಜಿಯಾ ಮತ್ತು ರಶೀದ್ ಎಂದು ಗುರುತಿಸಿದ್ದು ಇವರು ಜೂನ್ ತಿಂಗಳಲ್ಲಿ ಮನೆಯಿಂದ ಓಡಿಹೋಗಿ ವಿವಾಹವಾಗಿದ್ದರು. ಇದಾದ ನಂತರ ಯುವತಿ ನಾಜಿಯಾ ತಂದೆ ರಶೀದ್ ಮನೆಯ ಎದುರು ಧರಣಿ ನಡೆಸಿದ್ದರು. ಅಲ್ಲದೆ ನವದಂಒಅತಿಗಳು ಖಾನ್ ಮೊಹಲ್ಲಾದಲ್ಲಿ ವಾಸವಿದ್ದದ್ದನ್ನು ಕಂಡುಕೊಂಡ ಅವರು ದಂಪತಿಗಳಿಗೆ ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಆದರೆ ಇದಾಗಿ ಕೆಲ ದಿನಗಳ ನಂತರ ನವದಂಪತಿಗಳನ್ನು ತಮ್ಮ ಮನೆಯಲ್ಲಿ ಬಂದಿರುವಂತೆ ಆಹ್ವಾನಿಸಿದ್ದನಾಜಿಯಾ ತಂದೆ ನನಗೆ ನಿಮ್ಮ ಮೇಲೆ ಯಾವ ಕೋಪವಿಲ್ಲ ಎಂದು ಹೇಳಿಕೊಂಡರು.ಆಕೆಯ ತಂದೆ ಈ ಸಂಬಂಧವನ್ನು ಒಪ್ಪಿಕೊಂಡಿದ್ದಾರೆಂದು ನಂಬಿದ್ದ ನಾಜಿಯಾ ಕೆಲವು ದಿನಗಳ ಹಿಂದೆ ರಶೀದ್ ಅವರೊಂದಿಗೆ ತನ್ನ ಮನೆಗೆ ಬಂದಿದ್ದಳು ಎಂದು ಕಾಶಿಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಭಟ್ ಹೇಳಿದ್ದಾರೆ.
ಆದರೆ ಸೋಮವಾರ ರಾತ್ರಿ, ಅವರು ಮೋಟಾರ್ಸೈಕಲ್ನಲ್ಲಿ ಮಾರುಕಟ್ಟೆಯಿಂದ ಹಿಂದಿರುಗುತ್ತಿದ್ದಾಗ, ನಾಜಿಯಾ ಅವರ ತಂದೆ ಮತ್ತು ಆಕೆಯ ಸಹೋದರ ಅವರನ್ನು ತಡೆದು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಸಧ್ಯ ಗುಂಡು ಹಾರಿಸಿದ ಬಳಿಕ ಆರೋಪಿಗಳು ಪರಾರಿಯಾಗಿದ್ದು ಪೋಲೀಸರು ಶೋಧ ಕಾರ್ಯ ನಡೆಸಿದ್ದಾರೆ.
Advertisement