ಮಧ್ಯಪ್ರದೇಶ: ಪಿತೃಪಕ್ಷದಲ್ಲಿ ಮುಸ್ಲಿಂ ವ್ಯಕ್ತಿಗೆ ತರ್ಪಣ ಅರ್ಪಿಸುತ್ತಿರುವ ಹಿಂದೂ ಸ್ನೇಹಿತ!

ಅಪ್ರತಿಮ ಸ್ನೇಹಕ್ಕೆ ಯಾವುದೇ ಜಾತಿ ಧರ್ಮವಿಲ್ಲ, ಜಗತ್ತಿನಾದ್ಯಂತ ಹಿಂದೂಗಳು ತಮ್ಮ ಪಿತೃಗಳಿಗೆ ಪಿಂಡ ಅರ್ಪಿಸುತ್ತಿದ್ದಾರೆ.
ರಾಮ್ ನರೇಶ್ ದುಬೆ
ರಾಮ್ ನರೇಶ್ ದುಬೆ

ಭೂಪಾಲ್: ಅಪ್ರತಿಮ ಸ್ನೇಹಕ್ಕೆ ಯಾವುದೇ ಜಾತಿ ಧರ್ಮವಿಲ್ಲ, ಜಗತ್ತಿನಾದ್ಯಂತ ಹಿಂದೂಗಳು ತಮ್ಮ ಪಿತೃಗಳಿಗೆ ಪಿಂಡ ಅರ್ಪಿಸುತ್ತಿದ್ದಾರೆ.

ಮಧ್ಯಪ್ರದೇಶದ ಸಾಗರ ಜಿಲ್ಲೆಯ ಸೈಯ್ಯದ್ ವಾಹಿದ್ ಅಲಿ ಎಂಬುವರು ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಸಾಜಿದ್ ವಾಹಿದ್ ಅಲಿ ನನ್ನ ಉತ್ತಮ ಸ್ನೇಹಿತ, ಬಾಲ್ಯದಿಂದಲೂ ಉತ್ತಮ ಮಿತ್ರತ್ವ ಹೊಂದಿದ್ದೆವು,  ಗೋಪಾಲ್ ಗಂಜ್ ನಲ್ಲಿ ಆತ ವಕೀಲ ವೃತ್ತಿ ಮಾಡುತ್ತಿದ್ದ, ನಾನು ನನ್ನ ಹಿರಿಯರಿಗೆ  ತರ್ಪಣ ಸಲ್ಲಿಸುವಂತೆ ನನ್ನ ಸ್ನೇಹಿತನಿಗೂ ಪಿತೃಪಕ್ಷದಲ್ಲಿ ತರ್ಪಣ ಸಲ್ಲಿಸಿದ್ದೇನೆ, ಅವನ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತೆ ನಾವಿಬ್ಬರೂ ಸ್ನೇಹಿತರಾಗಿ ಜನಿಸಲು ಪ್ರಾರ್ಥಿಸುತ್ತೇನೆ ಎಂದು ಪಂಡಿತ್ ರಾಮ್ ನರೇಶ್ ದುಬೆ ಹೇಳಿದ್ದಾರೆ.

ಪ್ರತಿದಿನವೂ ತಮ್ಮ ಹಿರಿಯರಿಗೆ ಮತ್ತು ಸ್ನೇಹಿತ ಅಲಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸುತ್ತಾರೆ. ದಕ್ಷಿಣ ದಿಕ್ಕಿಗೆ ನಿಂತು ತಮ್ಮ ಹಿರಿಯರ ಹೆಸರು ಹೇಳಿ, ನೀರು ಹಾಲು ಮತ್ತು ಎಳ್ಳನ್ನು ಬಿಡಲಾಗುತ್ತದೆ.

2017ರ ನವೆಂಬರ್ ನಲ್ಲಿ ನನ್ನ ತಂದೆ ಸಾವನ್ನಪ್ಪಿದರು. ಅದಾದ ನಂತರ ನನ್ನ ತಂದೆಗೂ ಅವರು ತರ್ಪಣ ನೀಡುತ್ತಿದ್ದಾರೆ ಎಂದು ವಾಜಿದ್ ಅಲಿ ಪುತ್ರ ಹೇಳಿದ್ದಾರೆ.

ವಾಜಿದ್ ಮತ್ತು ದುಬೆ ನಡುವೆ ಇದ್ದಂತಹ ಸ್ನೇಹವನ್ನು ನಾನು ಎಲ್ಲಿಯೂ ನೋಡಿಲ್ಲ ಎಂದು ಪೂಜಾ ವಿಧಾನ ನಡೆಸುವ ಅರ್ಚಕರು ತಿಳಿಸಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com