ನವದೆಹಲಿ: ಮುಂಬೈ ನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡುವುದು ಅಪಚಾರ ಎಂದು ಕಾಂಗ್ರೆಸ್ ಹೇಳಿದೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈ ನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಕಂಗನಾ ಹೆಸರು ಉಲ್ಲೇಖಿಸದೇ ಮುಂಬೈ ಮಹಾರಾಷ್ಟ್ರ ಹಾಗೂ ದೇಶದ ಹೆಮ್ಮೆ. ಇಂತಹ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡುವುದು ಅಪಚಾರ ಎಂದು ಎಐಸಿಸಿ ಕಾರ್ಯದರ್ಶಿ ಆಶೀಶ್ ದುವಾ ಟ್ವೀಟ್ ಮಾಡಿದ್ದಾರೆ.
ಕಂಗನಾ ತಮಗೆ ಅನ್ಯಾಯವಾಗಿರುವುದರ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ದೂರು ಸಲ್ಲಿಸಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಜ್ಯಪಾಲರ ಕಚೇರಿ ರಾಜಕಾರಣ ನಡೆಸಲು ಇರುವುದಲ್ಲ ಎಂದು ಹೇಳಿದ್ದಾರೆ.
ಮುಂಬೈ ನಗರ ಲಕ್ಷಾಂತರ ಜನರ ಕನಸನ್ನು ತಾರತಮ್ಯ ಇಲ್ಲದೇ ನನಸಾಗಿಸಿರುವ ನಗರವಾಗಿದೆ. ಇದನ್ನು ಕೀಳಾಗಿ ಚಿತ್ರಿಸಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಕೂಡದು ಎಂದು ಕಾಂಗ್ರೆಸ್ ಹೇಳಿದೆ. ಬಿಜೆಪಿ ಜನತೆಯನ್ನು ಪ್ರಾದೇಶಿಕ ಆಧಾರದಲ್ಲಿ ಒಡೆಯುವುದನ್ನು ನಿಲ್ಲಿಸಬೇಕು ಎಂದು ಆಶೀಶ್ ದುವಾ ಹೇಳಿದ್ದಾರೆ.
Advertisement