ಬಾರದೂರಿಗೆ ಹೊರಟು ನಿಂತ 'ಬಾಲು': ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಅಂತ್ಯಕ್ರಿಯೆ
ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಎಂಬಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ ಅವರ ಅಂತಿಮ ಯಾತ್ರೆಯ ವಿಧಿ ವಿಧಾನ ಕಾರ್ಯಗಳು, ಧಾರ್ಮಿಕ ಸಂಪ್ರದಾಯಗಳು ನೆರವೇರುತ್ತಿವೆ.
Published: 26th September 2020 11:51 AM | Last Updated: 26th September 2020 12:46 PM | A+A A-

ಅಂತ್ಯಕ್ರಿಯೆ ವಿಧಿ ವಿಧಾನ
ಚೆನ್ನೈ: ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಎಂಬಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ ಅವರ ಅಂತಿಮ ಯಾತ್ರೆಯ ವಿಧಿ ವಿಧಾನ ಕಾರ್ಯಗಳು, ಧಾರ್ಮಿಕ ಸಂಪ್ರದಾಯಗಳು ನೆರವೇರುತ್ತಿವೆ. ಸಂಪೂರ್ಣ ಪೊಲೀಸ್ ಗೌರವದೊಂದಿಗೆ ಸಾಗುತ್ತಿದೆ.
ಎಸ್ ಪಿಬಿಯವರ ಪುತ್ರ ಹಿನ್ನೆಲೆ ಗಾಯಕ ಎಸ್ ಪಿ ಚರಣ್ ತಂದೆಯ ಅಂತಿಮ ಯಾತ್ರೆಯ ವಿಧಿ ವಿಧಾನಗಳನ್ನು ಶೈವ ಸಂಪ್ರದಾಯದಂತೆ ಕುಟುಂಬದ ಇತರ ಸದಸ್ಯರ ಸಮ್ಮುಖದಲ್ಲಿ ನೆರವೇರಿಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಸರ್ಕಾರದ ಜನಪ್ರತಿನಿಧಿಗಳು, ಗಣ್ಯರು ಸೇರಿದ್ದಾರೆ.
ತಮ್ಮ ನೆಚ್ಚಿನ ಗಾಯಕನನ್ನು ಅಂತಿಮವಾಗಿ ದುಃಖಭರಿತ, ಭಾರವಾದ ಹೃದಯದಿಂದ, ಸಕಲ ಸರ್ಕಾರಿ ಗೌರವಗಳೊಂದಿಗೆ ಕಳುಹಿಸಲಾಗುತ್ತಿದೆ.
Family and loved ones tearfully big goodbye to #SPBalasubrahmanyam at his farmhouse in Tamil Nadu's Tiruvallur. #RIPSPB #RIPSPBSir
— The New Indian Express (@NewIndianXpress) September 26, 2020
Express Photos | @ashwinacharya05 @xpresstn @shibasahu2012 pic.twitter.com/RsX8ASBEoR