ಜನರಿಗಾಗಿ ನಿಸ್ವಾರ್ಥ ಸೇವೆ ಮಾಡಿ: ಬಿಜೆಪಿ ಹೊಸ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ

ಬಿಜೆಪಿ ರಾಷ್ಟ್ರೀಯ ತಂಡವನ್ನು ರಾಜ್ಯದ ಸಂಸದ ತೇಜಸ್ವಿ ಸೂರ್ಯ ಮತ್ತು ಸಚಿವ ಸಿಟಿ ರವಿ ಸೇರಿಕೊಂಡಿದ್ದು ನೂತನ ಪದಾಧಿಕಾರಿಗಳಿಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಸಿಟಿ ರವಿ-ತೇಜಸ್ವಿ-ಮೋದಿ
ಸಿಟಿ ರವಿ-ತೇಜಸ್ವಿ-ಮೋದಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ತಂಡವನ್ನು ರಾಜ್ಯದ ಸಂಸದ ತೇಜಸ್ವಿ ಸೂರ್ಯ ಮತ್ತು ಸಚಿವ ಸಿಟಿ ರವಿ ಸೇರಿಕೊಂಡಿದ್ದು ನೂತನ ಪದಾಧಿಕಾರಿಗಳಿಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. 

ಪ್ರಧಾನಿ ಮೋದಿ  ಟ್ವೀಟ್ ಮೂಲಕ ನೂತನ ಪದಾಧಿಕಾರಿಗಳ ತಂಡಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು. ಭಾರತದ ಜನರಿಗೆ ನಿಸ್ವಾರ್ಥವಾಗಿ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುವ ನಮ್ಮ ಪಕ್ಷದ ಅದ್ಭುತ ಸಂಪ್ರದಾಯವನ್ನು ನೂತನ ಪದಾಧಿಕಾರಿಗಳು ಎತ್ತಿ ಹಿಡಿಯುತ್ತಾರೆ ಎಂದು ನನಗೆ ವಿಶ್ವಾಸವಿದೆ. ಬಡವರು ಮತ್ತು ಅಂಚಿನಲ್ಲಿರುವವರನ್ನು ಸಬಲೀಕರಣಗೊಳಿಸಲು ಅವರು ಶ್ರಮಿಸಲಿ ಎಂದು ಹೇಳಿದ್ದಾರೆ.

ಬಿಜೆಪಿ ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ ಅವರು ರಾಷ್ಟ್ರೀಯ ಪದಾಧಿಕಾರಿಗಳ ಹೊಸ ತಂಡವನ್ನು ಶನಿವಾರ ಪ್ರಕಟಿಸಿದರು. ಡಾ.ರಾಮನ್ ಸಿಂಗ್, ಮುಕುಲ್ ರಾಯ್, ಅನ್ನಪೂರ್ಣ ದೇವಿ, ಬೈಜಯಂತ್ ಜೇ ಪಾಂಡ ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು. ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಅವರನ್ನು ಯುವ ಮೋರ್ಚಾ ಮುಖ್ಯಸ್ಥರಾಗಿ ಮತ್ತು ರಾಜ್‌ಕುಮಾರ್ ಚಹಾರ್ ಕಿಸಾನ್ ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಭೂಪೇಂದ್ರ ಯಾದವ್, ಕೈಲಾಶ್ ವಿಜಯವರ್ಗಿಯಾ ಮತ್ತು ಸಿ.ಟಿ.ರವಿ ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com