ಅಕಾಲಿದಳ ತೊರೆದ ಮೇಲೆ ಎನ್ ಡಿಎ ದಲ್ಲಿ ಏನುಳಿದಿದೆ?: ಬಿಜೆಪಿ ಬಗ್ಗೆ ಶಿವಸೇನೆ ಸಾಮ್ನಾ ವ್ಯಂಗ್ಯ

ಕೃಷಿ ಮಸೂದೆಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಬೆನ್ನಲ್ಲೇ ಬಿಜೆಪಿ ಬಗ್ಗೆ ಶಿವಸೇನೆ ವ್ಯಂಗ್ಯವಾಡಿದೆ. 
ಅಕಾಲಿದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್-ಮೋದಿ
ಅಕಾಲಿದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್-ಮೋದಿ

ನವದೆಹಲಿ: ಕೃಷಿ ಮಸೂದೆಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಬೆನ್ನಲ್ಲೇ ಬಿಜೆಪಿ ಬಗ್ಗೆ ಶಿವಸೇನೆ ವ್ಯಂಗ್ಯವಾಡಿದೆ. 

ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿಕೂಟ ತೊರೆದ ಬಳಿಕ ಬಿಜೆಪಿ ನೇತೃತ್ವದ ಮೈತ್ರಿಕೂಟ ಇನ್ನೂ ಅಸ್ತಿತ್ವದಲ್ಲಿದೆಯೇ? ಇದ್ದರೆ ಯಾರೆಲ್ಲಾ ಮೈತ್ರಿಕೂಟದಲ್ಲಿದ್ದಾರೆ ಎಂದು ವ್ಯಂಗ್ಯವಾಗಿ ಸಾಮ್ನಾ ಪತ್ರಿಕೆಯಲ್ಲಿ ಪ್ರಶ್ನಿಸಿದೆ. 

ಎನ್ ಡಿಎ ಯ ಕೊನೆಯ ಪಿಲ್ಲರ್ ಶಿರೋಮಣಿ ಅಕಾಲಿ ದಳ ಮೈತ್ರಿ ತೊರೆಯುವುದನ್ನು ತಡೆಯುವುದಕ್ಕೆ ಯಾವುದೇ ಪ್ರಯತ್ನಗಳೂ ಆಗದೇ ಇರುವುದು ಅಚ್ಚರಿ ಮೂಡಿಸಿದೆ ಎಂದು ಸಾಮ್ನಾ ಪತ್ರಿಕೆ ಹೇಳಿದೆ. 

ಶಿವಸೇನೆ ಹಾಗೂ ಶಿರೋಮಣಿ ಅಕಾಲಿದಳ ಎನ್ ಡಿಎಯಿಂದ ಹೊರನಡೆದ ಬಳಿಕ ಎನ್ ಡಿಎಯಲ್ಲಿ ಏನು ಉಳಿದಿದೆ? ಎನ್ ಡಿಎ ಜೊತೆಗೆ ಇನ್ನೂ ಇರುವವರಿಗೂ ಹಿಂದುತ್ವಕ್ಕೂ ಏನಾದರೂ ಸಂಬಂಧವಿದೆಯೇ ಎಂದು ಶಿವಸೇನೆ ಪ್ರಶ್ನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com