ಈಸ್ಟರ್ ಶುಭಾಶಯ ಕೋರಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟರ್ ದಿನದಂದು ಶುಭಾಶಯ ಕೋರಿದ್ದಾರೆ. ಈಸ್ಟರ್ , ಯೇಸುಕ್ರಿಸ್ತನನ್ನು ಶಿಲುಬೆಗೆ ಹಾಕಲ್ಪಟ್ಟ ಮೂರು ದಿನಗಳ ನಂತರ ಪುನರುತ್ಥಾನವನ್ನು ಆಚರಿಸುವ ಕ್ರಿಶ್ಚಿಯನ್ ಹಬ್ಬವಾಗಿದೆ.
Published: 04th April 2021 10:27 AM | Last Updated: 04th April 2021 10:31 AM | A+A A-

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟರ್ ದಿನದಂದು ಶುಭಾಶಯ ಕೋರಿದ್ದಾರೆ. ಈಸ್ಟರ್ , ಯೇಸುಕ್ರಿಸ್ತನನ್ನು ಶಿಲುಬೆಗೆ ಹಾಕಲ್ಪಟ್ಟ ಮೂರು ದಿನಗಳ ನಂತರ ಪುನರುತ್ಥಾನವನ್ನು ಆಚರಿಸುವ ಕ್ರಿಶ್ಚಿಯನ್ ಹಬ್ಬವಾಗಿದೆ.
ವಿಶ್ವದಾದ್ಯಂತ ಆಚರಿಸಲ್ಪಡುವ ಯೇಸುಕ್ರಿಸ್ತನ ಪುನರುತ್ಥಾನವು ನಮಗೆ ಭರವಸೆ ಮತ್ತು ಸಂತೋಷವನ್ನು ನೀಡುತ್ತದೆ. ಮಾನವೀಯತೆಯ ಸಹಜ ಒಳ್ಳೆಯತನದ ಬಗ್ಗೆ ನಮ್ಮ ನಂಬಿಕೆಯನ್ನು ಪುನರುಚ್ಚರಿಸುತ್ತದೆ. ಯೇಸುಕ್ರಿಸ್ತನ ಬೋಧನೆಗಳು ನಮ್ಮ ಸಮಾಜದಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಸಾಮರಸ್ಯದ ಬಂಧಗಳನ್ನು ಬಲಪಡಿಸಲಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
Easter greetings to all! The resurrection of Jesus Christ, celebrated across the world, gives us hope and happiness; reaffirms our faith in innate goodness of humanity. May the teachings of Jesus Christ strengthen the bonds of love, affection and harmony in our society!
— President of India (@rashtrapatibhvn) April 4, 2021
ಈ ದಿನ, ನಾವು ಯೇಸುಕ್ರಿಸ್ತನ ಧಾರ್ಮಿಕ ಬೋಧನೆಗಳನ್ನು ನೆನಪಿಸಿಕೊಳ್ಳುತ್ತೇವೆ. ಸಾಮಾಜಿಕ ಸಬಲೀಕರಣಕ್ಕೆ ಅವರು ಕೊಟ್ಟ ಸಂದೇಶ ಪ್ರಪಂಚದಾದ್ಯಂತದ ಲಕ್ಷಾಂತರ ಜನರನ್ನು ಪ್ರೇರೇಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
Greetings on Easter!
— Narendra Modi (@narendramodi) April 4, 2021
On this day, we remember the pious teachings of Jesus Christ. His emphasis on social empowerment inspires millions across the world.
ಈಸ್ಟರ್ ಅನ್ನು ಪಾಸ್ಚಾ ಅಥವಾ ಪುನರುತ್ಥಾನ ಭಾನುವಾರ ಎಂದೂ ಕರೆಯುತ್ತಾರೆ, ಇದನ್ನು ಕ್ರಿಶ್ಚಿಯನ್ನರು ರಜಾದಿನವೆಂದು ಆಚರಿಸುತ್ತಾರೆ ಯೇಸುವಿನ ಪುನರುತ್ಥಾನದ ನೆನಪಿಗಾಗಿ, ಈಸ್ಟರ್ ಸಾವಿನ ಸೋಲು ಮತ್ತು ಮೋಕ್ಷದ ಭರವಸೆಯಾಗಿದೆ.