ಬಂಗಾಳ ಚುನಾವಣೆ: ಇವಿಎಂ ತಿರುಚಲಾಗಿದೆ, ಎಲ್ಲಾ ಮತಗಳು ಬಿಜೆಪಿಗೆ ಹೋಗುತ್ತಿವೆ: ಟಿಎಂಸಿ ಅಭ್ಯರ್ಥಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೂರನೇ ಹಂತದ ನಡೆಯುತ್ತಿದ್ದು, ಅರಂಬಾಗ್ನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಅವ್ಯವಸ್ಥೆ ಸೃಷ್ಟಿಸಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಅಭ್ಯರ್ಥಿ ಸುಜಾತಾ ಮೊಂಡಲ್ ಖಾನ್ ಅವರು ಮಂಗಳವಾರ ಆರೋಪಿಸಿದ್ದಾರೆ.
Published: 06th April 2021 03:02 PM | Last Updated: 06th April 2021 04:39 PM | A+A A-

ಸಾಂದರ್ಭಿಕ ಚಿತ್ರ
ಹೂಗ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೂರನೇ ಹಂತದ ನಡೆಯುತ್ತಿದ್ದು, ಅರಂಬಾಗ್ನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಅವ್ಯವಸ್ಥೆ ಸೃಷ್ಟಿಸಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಅಭ್ಯರ್ಥಿ ಸುಜಾತಾ ಮೊಂಡಲ್ ಖಾನ್ ಅವರು ಮಂಗಳವಾರ ಆರೋಪಿಸಿದ್ದಾರೆ.
ಎನ್ಎನ್ಐ ಜತೆ ಮಾತನಾಡಿದ ಸುಜಾತಾ ಅವರು, "ಬಟನಾಲ್ ನ ಬೂತ್ ನಂಬರ್ 45 ರಲ್ಲಿ, ಟಿಎಂಸಿಯ ಚಿಹ್ನೆಯನ್ನು ಒತ್ತಿದರೂ ಮತ ಬಿಜೆಪಿಗೆ ಹೋಗುತ್ತಿದೆ. ಇವಿಎಂ(ವಿದ್ಯುನ್ಮಾನ ಮತ ಯಂತ್ರ) ಅನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.
ನಾನು ಜನರ ಆಶೀರ್ವಾದ ಪಡೆಯುತ್ತೇನೆ ಎಂಬ ವಿಶ್ವಾಸ ಇದೆ. ಅರಾಂಡಿಯಲ್ಲಿ, ನಮ್ಮ ಕಾರ್ಯಕರ್ತರನ್ನು ಥಳಿಸಲಾಗಿದೆ. ಅವರು(ಬಿಜೆಪಿ) ಹಿಂಸಾಚಾರವನ್ನು ಸೃಷ್ಟಿಸುವ ಮೂಲಕ ಅರಂಬಾಗ್ ಕ್ಷೇತ್ರದಲ್ಲಿ ಗೆಲವು ಸಾಧಿಸಬಹುದು ಎಂದು ಯೋಚಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ನಾನು ಸಾವಿಗೆ ಹೆದರುವ ವ್ಯಕ್ತಿ ಅಲ್ಲ ಎಂದಿದ್ದಾರೆ.
ಬಿಜೆಪಿ ಮತ್ತು ನನ್ನ ನಡುವೆ ನೇರ ಹಣಾಹಣಿ ಇಲ್ಲ ಮತ್ತು ಇಲ್ಲಿ ಸಂಯುಕ್ತ ಮೋರ್ಚಾದ ಅಸ್ತಿತ್ವವೂ ಇಲ್ಲ. ಹೀಗಾಗಿ ನನ್ನ ಗೆಲುವು ಖಚಿತ. ಆದರೆ ಸಿಆರ್ ಪಿಎಫ್ ತಟಸ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೋಡಿದಾಗ ನನಗೆ ಬೇಸರವಾಗುತ್ತದೆ ಎಂದಿದ್ದಾರೆ.