ಹಿರೇನ್ ಕೊಲೆ: ಸಚಿನ್ ವಾಜೆಯನ್ನು ಛತ್ರಪತಿ ಶಿವಾಜಿ ರೈಲು ನಿಲ್ದಾಣಕ್ಕೆ ಕರೆದೊಯ್ದ ಎನ್ಐಎ, ಘಟನಾವಳಿ ಮರುಸೃಷ್ಟಿಸಿ ತನಿಖೆ!
ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಚಿನ್ ವಾಜೆಯನ್ನು ಎನ್ಐಎ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣಕ್ಕೆ ಕರೆದೊಯ್ದು ಘಟನಾವಳಿಯ ಮರುಸೃಷ್ಟಿಸಿ ತನಿಖೆ ನಡೆಸಿತು.
Published: 06th April 2021 02:25 PM | Last Updated: 06th April 2021 02:30 PM | A+A A-

ಸಚಿನ್ ವಾಜೆ
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಂಬೈ ಕ್ರೈಂ ಬ್ರ್ಯಾಂಚ್ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ರಾಷ್ಟ್ರೀಯ ತನಿಖಾ ಸಂಸ್ಧೆ(ಎನ್ಐಎ) ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣಕ್ಕೆ ಕರೆದೊಯ್ದು ಘಟನಾವಳಿಯ ಮರುಸೃಷ್ಟಿಸಿ ತನಿಖೆ ನಡೆಸಿತು.
ಸಚಿನ್ ವಾಜೆ ಉದ್ಯಮಿ ಮನ್ಸೂಖ್ ಹಿರೇನ್ ಕೊಲೆಯಾದ ದಿನ ಶಿವಾಜಿ ಮಹಾರಾಜ್ ರೈಲು ನಿಲ್ದಾಣದಿಂದ ಥಾಣೆ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು. ಈ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಹೀಗಾಗಿ ಎನ್ಐಎ ಸಚಿನ್ ವಾಜೆಯನ್ನು ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣಕ್ಕೆ ಕರೆದೊಯ್ದು ಘಟನಾವಳಿಗಳನ್ನು ಮರುಸೃಷ್ಟಿಸಿ ತನಿಖೆ ನಡೆಸಿದೆ. ಮಾರ್ಚ್ 5ರಂದು ಉದ್ಯಮಿ ಮನ್ಸೂಕ್ ಹಿರೇನ್ ಅವರ ಮೃತದೇಹ ಥಾಣೆ ಸಮೀಪ ಪತ್ತೆಯಾಗಿತ್ತು.
ಕಳೆದ ಫೆಬ್ರವರಿ 25ರಂದು ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾಗಿತ್ತು. ಈ ಕಾರು ಕೊಲೆಯದ ಉದ್ಯಮಿ ಹಿರೇನ್ ಗೆ ಸೇರಿದ್ದಾಗಿದ್ದು ಈ ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿ ಅದನ್ನು ಅಂಬಾನಿ ಮನೆ ಮುಂದೆ ನಿಲ್ಲಿಸಿದ್ದು ಸಚಿನ್ ವಾಜೆ ಎಂಬುದು ತನಿಖೆಯಿಂದ ಬಲಯಾಗಿದೆ.
In CCTV footage (in pic), Sachin Waze was seen going to Chhatrapati Shivaji Maharaj Terminus at 7 pm on 4th March. He had taken a local train to Thane that day. He was brought to CSMT y'day for scene recreation
— ANI (@ANI) April 6, 2021
Body of Mansukh Hiren was found at Kalwa creek in Thane on 5th March pic.twitter.com/gnMfdaMLLQ