ತಲೆ ಮೇಲೆ ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್!

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತಲೆ ಮೇಲೆ ಇರುಮುಡಿ ಹೊತ್ತು, ಕೊರಳಲ್ಲಿ ಮಾಲೆ ಧರಿಸಿ, 18 ಮೆಟ್ಟಿಲನ್ನು ಹತ್ತಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಆರಿಫ್ ಮೊಹಮ್ಮದ್ ಖಾನ್
ಆರಿಫ್ ಮೊಹಮ್ಮದ್ ಖಾನ್

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತಲೆ ಮೇಲೆ ಇರುಮುಡಿ ಹೊತ್ತು, ಕೊರಳಲ್ಲಿ ಮಾಲೆ ಧರಿಸಿ, 18 ಮೆಟ್ಟಿಲನ್ನು ಹತ್ತಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. 

ಆರಿಫ್ ಮೊಹಮ್ಮದ್ ಖಾನ್ ಅವರು ಇರುಮುಡಿ ಕಟ್ಟಿಕೊಂಡು ಐದು ಕಿ.ಮೀ ಪಾದಾಯತ್ರೆ ನಡೆಸಿ ಶಬರಿಮಲೆ ಸಂಪ್ರದಾಯದಂತೆ ಅಯ್ಯಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. 

ಆರಿಫ್ ಮೊಹಮ್ಮದ್ ಖಾನ್ ರಿಗೆ ಅವರ ಪುತ್ರ ಕಬೀರ್ ಕೂಡ ಸಾಥ್ ನೀಡಿದ್ದಾರೆ. ಕೇರಳದಲ್ಲಿ ವಿಷು ಹಬ್ಬ ಹಿನ್ನೆಲೆಯಲ್ಲಿ ತಿಂಗಳ ಪೂಜೆ ನಡೆಯುತ್ತದೆ. ಹೀಗಾಗಿ ದೇವಾಲಯ ತೆರೆಯಲಾಗಿದೆ. ಇನ್ನು ರಾಜ್ಯಪಾಲರು ಅಯ್ಯಪ್ಪನ ದರ್ಶನ ಪಡೆದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com