ಕೊಲ್ಲಂ: ಕೊಲ್ಲಂನ ಕುರೀಪುಳದಲ್ಲಿರುವ ಕಾನ್ವೆಂಟ್ನಲ್ಲಿ ಶುಕ್ರವಾರ ಬೆಳಿಗ್ಗೆ 42 ವರ್ಷದ ಸನ್ಯಾಸಿನಿಯೊಬ್ಬರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕರುಣಗಪಲ್ಲಿಯ ಪಾವುಂಬಾ ನಿವಾಸಿ ಮಾಬೆಲ್ ಜೋಸೆಫ್ ಎಂದು ಗುರುತಿಸಲಾಗಿದೆ. ಬೆಳಗ್ಗೆ ಪ್ರಾರ್ಥನೆಗೆ ಹಾಜರಾಗಲು ಸಾದ್ಯವಾಗದ ಕಾರಣ ತಾನು ಆತ್ನಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿದ್ದಾರೆ. ಈ ಡೆತ್ ನೋಟ್ ಅವರ ಸಹ ಸನ್ಯಾಸಿನಿಗಳಿಗೆ ತಿಳಿದಿದೆ.
ದೈಹಿಕ ಆಲಸ್ಯ ಮತ್ತು ದೇಹದ ಅಲರ್ಜಿ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ. ಮಾಬೆಲ್ ಆರು ತಿಂಗಳ ಹಿಂದೆ ಕಾನ್ವೆಂಟ್ ಗೆ ಬಂದಿದ್ದರು. ಮಾಬೆಲ್ ಅವರ ದೇಹವನ್ನು ಹೊರ ತೆಗೆಯಲಾಗಿದೆ.
Advertisement