ದೇಶಾದ್ಯಂತ ಎನ್ ಆರ್ ಸಿ ಮಾಡುವ ಕುರಿತು ನಿರ್ಧರಿಸಿಲ್ಲ: ಕೇಂದ್ರ ಸಚಿವ ನಿತ್ಯಾನಂದ ರೈ

ಇಡೀ ದೇಶಕ್ಕೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಐಸಿ) ಯೋಜನೆ ಸಿದ್ಧಪಡಿಸುವ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಮಂಗಳವಾರ ಸಂಸತ್ತಿಗೆ ಹೇಳಿದ್ದಾರೆ. 
ಕೇಂದ್ರ ಸಚಿವ ನಿತ್ಯಾನಂದ ರೈ
ಕೇಂದ್ರ ಸಚಿವ ನಿತ್ಯಾನಂದ ರೈ

ನವದೆಹಲಿ: ಇಡೀ ದೇಶಕ್ಕೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಐಸಿ) ಯೋಜನೆ ಸಿದ್ಧಪಡಿಸುವ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಮಂಗಳವಾರ ಸಂಸತ್ತಿಗೆ ಹೇಳಿದ್ದಾರೆ. 

ಈ ಕುರಿತಂತೆ ಮಂಗಳವಾರ  ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, '2021 ರ ಜನಗಣತಿಯ ಮೊದಲ ಹಂತದ ಜೊತೆಗೆ ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (NPR) ನವೀಕರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

'ಇಲ್ಲಿಯವರೆಗೆ, ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನಾಗರಿಕರ ನೋಂದಣಿಯನ್ನು (NRC) ತಯಾರಿಸಲು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.  ಇಲ್ಲಿಯವರೆಗೆ, ಎನ್‌ಆರ್‌ಸಿಯನ್ನು ಅಸ್ಸಾಂನಲ್ಲಿ ಮಾತ್ರ ನವೀಕರಿಸಲಾಗಿದೆ. 2019 ರಲ್ಲಿ NRC ಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದಾಗ, 3.3 ಕೋಟಿ ಅರ್ಜಿದಾರರಲ್ಲಿ ಒಟ್ಟು 19.06 ಲಕ್ಷವನ್ನು ಹೊರತುಪಡಿಸಲಾಯಿತು, ಇದು ದೊಡ್ಡ ರಾಜಕೀಯ ವಿವಾದವನ್ನು ಪ್ರಚೋದಿಸಿತ್ತು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಸ್ಸಾಂನಲ್ಲಿ ಎನ್‌ಆರ್‌ಸಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳ ನಿರ್ಧಾರಗಳ ಫಲಿತಾಂಶದಿಂದ ತೃಪ್ತರಾಗದ ಯಾವುದೇ ವ್ಯಕ್ತಿಯು ದಿನಾಂಕದಿಂದ 120 ದಿನಗಳಲ್ಲಿ ಗೊತ್ತುಪಡಿಸಿದ ವಿದೇಶಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು.  

ಅಂತೆಯೇ ಅಸ್ಸಾಂನಲ್ಲಿ ಎನ್‌ಆರ್‌ಸಿಯಿಂದ ಹೊರಗಿಡಲ್ಪಟ್ಟವರು ಇನ್ನೂ ಲಭ್ಯವಿರುವ ಎಲ್ಲ ಕಾನೂನು ಪರಿಹಾರಗಳನ್ನು ಮುಗಿಸಿಲ್ಲವಾದ್ದರಿಂದ, ಅವರ ರಾಷ್ಟ್ರೀಯತೆಯ ಪರಿಶೀಲನೆಯ ಪ್ರಶ್ನೆಯು ಈ ಹಂತದಲ್ಲಿ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. 

ಎನ್‌ಪಿಆರ್ ಅನ್ನು ಉಲ್ಲೇಖಿಸಿ ಮಾತನಾಡಿದ ಸಚಿವರು, 'ಸರ್ಕಾರವು ಇದನ್ನು 2021 ರ ಮೊದಲ ಹಂತದ ಜನಗಣತಿಯೊಂದಿಗೆ ನವೀಕರಿಸಲು ನಿರ್ಧರಿಸಿದೆ. ಎನ್‌ಪಿಆರ್ ಅನ್ನು ನವೀಕರಿಸುವ ಪ್ರಕ್ರಿಯೆ ಸಮಯದಲ್ಲಿ ಪ್ರತಿ ಕುಟುಂಬ ಮತ್ತು ವ್ಯಕ್ತಿಯ ಜನಸಂಖ್ಯಾಶಾಸ್ತ್ರ ಮತ್ತು ಇತರ ವಿವರಗಳನ್ನು ನವೀಕರಿಸಬೇಕು ಅಥವಾ ಸಂಗ್ರಹಿಸಬೇಕು. ಈ ಕಾರ್ಯಕ್ರಮದ ಸಮಯದಲ್ಲಿ ಯಾವುದೇ ದಾಖಲೆ ಸಂಗ್ರಹಿಸಬೇಕಾಗಿಲ್ಲ. ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕ ಕಾರಣ, NPR ನವೀಕರಣ ಮತ್ತು ಇತರ ಸಂಬಂಧಿತ ಕ್ಷೇತ್ರ ಚಟುವಟಿಕೆಗಳನ್ನು ಮುಂದೂಡಲಾಗಿದೆ ಎಂದು ರೈ ಹೇಳಿದರು.

NPR ನ ಉದ್ದೇಶವು ದೇಶದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಗಳ ಸಮಗ್ರ ಗುರುತಿನ ದತ್ತಾಂಶವನ್ನು ರಚಿಸುವುದಾಗಿದೆ. ಈ ಡೇಟಾಬೇಸ್ ಜನಸಂಖ್ಯಾ ಹಾಗೂ ಬಯೋಮೆಟ್ರಿಕ್ ವಿವರಗಳನ್ನು ಒಳಗೊಂಡಿರುತ್ತದೆ.  ಎನ್‌ಪಿಆರ್ ದೇಶದ ಸಾಮಾನ್ಯ ನಿವಾಸಿಗಳ ರಿಜಿಸ್ಟರ್ ಆಗಿದೆ. ಇದನ್ನು ಸ್ಥಳೀಯ (ಗ್ರಾಮ ಮತ್ತು ಉಪ ನಗರ), ಉಪ ಜಿಲ್ಲೆ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪೌರತ್ವ ಕಾಯ್ದೆ, 1955 ಮತ್ತು ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳ ಅಡಿಯಲ್ಲಿ ಸಿದ್ಧಪಡಿಸಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com