ಭಾರತದ ಟ್ವೀಟರ್ ಮುಖ್ಯಸ್ಥ ಮನೀಶ್ ಮಹೇಶ್ವರಿಯನ್ನು ದೇಶದಿಂದ ಹೊರಕ್ಕೆ ವರ್ಗಾವಣೆ!

ಕೇಂದ್ರ ಸರ್ಕಾರದ ಜೊತೆಗೆ ಹಗ್ಗಜಗ್ಗಾಟ. ಅಲ್ಲದೆ ಕಾಂಗ್ರೆಸ್ ಮತ್ತು ಮುಖಂಡರ ಖಾತೆಗಳು ಬ್ಯಾನ್ ವಿವಾದ ನಡುವೆ ಟ್ವೀಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರನ್ನು ದೇಶದಿಂದ ಹೊರಕ್ಕೆ ವರ್ಗಾವಣೆ ಮಾಡಲಾಗಿದೆ. 
ಮನೀಶ್ ಮಹೇಶ್ವರಿ
ಮನೀಶ್ ಮಹೇಶ್ವರಿ

ನವದೆಹಲಿ: ಕೇಂದ್ರ ಸರ್ಕಾರದ ಜೊತೆಗೆ ಹಗ್ಗಜಗ್ಗಾಟ. ಅಲ್ಲದೆ ಕಾಂಗ್ರೆಸ್ ಮತ್ತು ಮುಖಂಡರ ಖಾತೆಗಳು ಬ್ಯಾನ್ ವಿವಾದ ನಡುವೆ ಟ್ವೀಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರನ್ನು ದೇಶದಿಂದ ಹೊರಕ್ಕೆ ವರ್ಗಾವಣೆ ಮಾಡಲಾಗಿದೆ. 

ಟ್ವೀಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮನೀಶ್ ಮಹೇಶ್ವರಿಗೆ ಇದೀಗ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ಕಂದಾಯ ಕಾರ್ಯತಂತ್ರ ವಿಭಾಗದ ಹಿರಿಯ ನಿರ್ದೇಶಕನ ಹುದ್ದೆ ನೀಡಿದೆ. 

ಹೊಸ ಮಾರುಕಟ್ಟೆಗಳ ಮೇಲೆ ಕೇಂದ್ರೀಕರಿಸಿರುವ ಕಂದಾಯ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ ಹಿರಿಯ ನಿರ್ದೇಶಕರ ಪಾತ್ರದಲ್ಲಿ ಮನೀಶ್ ಮಹೇಶ್ವರಿ ಅಮೆರಿಕಗೆ ತೆರಳುತ್ತಿದ್ದಾರೆ. ಮನೀಶ್ ಟ್ವೀಟರ್ ನಲ್ಲಿ ಗ್ಲೋಬಲ್ ಸ್ಟ್ರಾಟಜಿ ಮತ್ತು ಆಪೇರಷನ್ಸ್ ನ ಹಿರಿಯ ನಿರ್ದೇಶಕಾರದ ಡಯೆಟ್ರಾ ಮರಾ ಅವರಿಗೆ ವರದಿ ಮಾಡಲಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಕಳೆದ ಎರಡು ವರ್ಷಗಳಲ್ಲಿ ಭಾರತೀಯ ವ್ಯವಹಾರದ ನಿಮ್ಮ ನಾಯಕತ್ವಕ್ಕಾಗಿ ಮನೀಶ್ ಮಹೇಶ್ವರಿ ಅವರಿಗೆ ಧನ್ಯವಾದಗಳು. ಜಗತ್ತಿನಾದ್ಯಂತ ಹೊಸ ಮಾರುಕಟ್ಟೆಗೆ ಕಂದಾಯ ತಂತ್ರ ಮತ್ತು ಕಾರ್ಯಾಚರಣೆಗಳ ಉಸ್ತುವಾರಿಯಲ್ಲಿ ನಿಮ್ಮ ಹೊಸ ಅಮೆರಿಕ ಮೂಲದ ಜವಾಬ್ದಾರಿಗೆ ಅಭಿನಂದನೆಗಳು ಎಂದು ಟ್ವೀಟರ್ ಜಪಾನ್ ಉಪಾಧ್ಯಕ್ಷ ಯು ಸಸಮೊಟೊ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com