ರಾಹುಲ್ ಟ್ವೀಟ್ ತೆಗೆದಿದ್ದನ್ನು ವಿರೋಧಿಸಿ 'ಟ್ವಿಟರ್ ಪಕ್ಷಿ' ಫ್ರೈ ಮಾಡಿದ್ದ ಕಾಂಗ್ರೆಸ್ ನಾಯಕನ ವಜಾ, ವಿಡಿಯೋ ವೈರಲ್!

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಖಾತೆಯನ್ನು ಕಿತ್ತು ಹಾಕಿದ್ದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಟ್ವಿಟರ್ ಪಕ್ಷಿಯನ್ನು ಬೇಯಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.
ರಾಹುಲ್ ಗಾಂಧಿ-ಶ್ರೀರಾಜ್
ರಾಹುಲ್ ಗಾಂಧಿ-ಶ್ರೀರಾಜ್

ವಿಜಯವಾಡ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಖಾತೆಯನ್ನು ಕಿತ್ತು ಹಾಕಿದ್ದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಟ್ವಿಟರ್ ಪಕ್ಷಿಯನ್ನು ಬೇಯಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಈ ವಿಡಿಯೋ ವೈರಲ್ ಆಗಿತ್ತು. ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಕಾಂಗ್ರೆಸ್ ಕಮಿಟಿ(ಎಪಿಸಿಸಿ) ಜಿವಿ ಶ್ರೀರಾಜ್ ನನ್ನು ಪಕ್ಷದಿಂದ ವಜಾ ಮಾಡಿದೆ. 

ಎಪಿಸಿಸಿ ಅಧ್ಯಕ್ಷ ಎಲ್ ಈಶ್ವರ ರಾವ್ ಅವರು ಶ್ರೀರಾಜ್ ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದರು.

ಶ್ರೀರಾಜ್ ವರ್ತನೆ ಕಾಂಗ್ರೆಸ್ ಪಕ್ಷದ ಘನತೆಗೆ ಧಕ್ಕೆ ತಂದಿದೆ. ಅಲ್ಲದೆ ರಾಹುಲ್ ಗಾಂಧಿ ಹೆಸರನ್ನು ಕಾಂಗ್ರೆಸ್ ಪಕ್ಷದ ಮೌಲ್ಯಗಳನ್ನು ಕುಸಿಯುವ ರೀತಿಯಲ್ಲಿ ಬಳಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಜಿವಿ ಶ್ರೀರಾಜ್ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಂಸದ ಜಿವಿ ಹರ್ಷ ಕುಮಾರ್ ಅವರ ಪುತ್ರ. ರಾಹುಲ್ ಗಾಂಧಿ ಟ್ವೀಟರ್ ಖಾತೆಯನ್ನು ಅಮಾನತುಗೊಳಿಸಿದ ಕ್ರಮವನ್ನು ಖಂಡಿಸುವ ಭರದಲ್ಲಿ ಇದೀಗ ತಮ್ಮ ಪ್ರಾಥಮಿಕ ಸದಸ್ಯತ್ವವನ್ನೇ ಕಳೆದುಕೊಳ್ಳಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com