ಪಣಜಿ: ದೈವಿಕ ಶಕ್ತಿಗಳು ಒಂದಾಗುತ್ತಿವೆ, ಹೀಗಾಗಿ ಈ ಬಾರಿ ಏನೋ ಒಳ್ಳೆಯದಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಆರವಿಂದ್ ಕೇಜ್ರಿವಾಲ್ ಗೋವಾ ಚುನಾವಣೆ ಕುರಿತು ಹೇಳಿದ್ದಾರೆ.
ಗೋವಾಗೆ ಭೇಟಿ ನೀಡಿರುವ ಕೇಜ್ರಿವಾಲ್ ಶನಿವಾರ ಪಕ್ಷದ ಸ್ಥಳೀಯ ನಾಯಕ ಅಮಿತ್ ಪಾಲೇಕರ್ ಅವರನ್ನು ಭೇಟಿ ಮಾಡಿದ್ದಾರೆ. ಅಮಿತ್ ಪಾಲೇಕರ್ ಅವರು ಇತ್ತೀಚಿಗaapಷ್ಟೇ ಹಳೆ ಗೋವಾ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಸರ್ಕಾರಿ ಬಂಗಲೆ ವಿರುದ್ಧ ಪ್ರತಿಭಟನಾರ್ಥ ಉಪವಾಸ ಮುಷ್ಕರ ಕೈಗೊಂಡಿದ್ದರು.
ಮುಷ್ಕರಕ್ಕೆ ಮಣಿದ ಸರ್ಕಾರ, ಬಂಗಲೆ ನಿರ್ಮಾಣ ಯೋಜನೆಗೆ ತಡೆ ನೀಡಿದ ಹಿನ್ನೆಲೆಯಲ್ಲಿ ಅಮಿತ್ ಮುಷ್ಕರ ಹಿಂಪಡೆದಿದ್ದರು. ಇದನ್ನು ಪ್ರಸ್ತಾಪಿಸಿದ ಕೇಜ್ರಿವಾಲ್, ಅಮಿತ್ ಪಾಲೇಕರ್ ಪರ ಹೆಮ್ಮೆ ವ್ಯಕ್ತಪಡಿಸಿದರು.
Advertisement