ರಿಜ್ವಿ ಬಳಿಕ ಇಸ್ಲಾಮ್ ತೊರೆದು ಹಿಂದೂ ಧರ್ಮ ಸ್ವೀಕರಿಸಲು ಮುಂದಾದ ಖ್ಯಾತ ನಿರ್ದೇಶಕ ಅಲಿ ಅಕ್ಬರ್; ಕಾರಣ ಹೀಗಿದೆ..

ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಇತ್ತೀಚೆಗೆ ಇಸ್ಲಾಮ್ ತೊರೆದು ಸನಾತನ ಧರ್ಮಾನುಯಾಗಿ ಪರ್ವರ್ತನೆಗೊಂಡಿದ್ದರು. ಈಗ ಅದೇ ಹಾದಿಯಲ್ಲಿದ್ದಾರೆ ಖ್ಯಾತ ನಿರ್ದೇಶಕ ಅಲಿ ಅಕ್ಬರ್.
ನಿರ್ದೇಶಕ ಅಲಿ ಅಕ್ಬರ್
ನಿರ್ದೇಶಕ ಅಲಿ ಅಕ್ಬರ್

ತಿರುವನಂತಪುರಂ: ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಇತ್ತೀಚೆಗೆ ಇಸ್ಲಾಮ್ ತೊರೆದು ಸನಾತನ ಧರ್ಮಾನುಯಾಗಿ ಪರ್ವರ್ತನೆಗೊಂಡಿದ್ದರು. ಈಗ ಅದೇ ಹಾದಿಯಲ್ಲಿದ್ದಾರೆ ಖ್ಯಾತ ನಿರ್ದೇಶಕ ಅಲಿ ಅಕ್ಬರ್.

ಅಲಿ ಅಕ್ಬರ್ ಅವರ ಈ ನಿರ್ಧಾರಕ್ಕೆ ಕಾರಣ ಸಿಡಿಎಸ್ ಬಿಪಿನ್ ರಾವತ್ ಅವರ ದುರ್ಮರಣಕ್ಕೆ ಕೆಲವು ಮುಸ್ಲಿಮರು ಸಂತಸ, ನಗುವಿನ ಎಮೋಜಿ ಹಾಕಿ ಸಂಭ್ರಮಿಸಿರುವುದಾಗಿದೆ. 

ಸಿಡಿಎಸ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದ್ದ ದೇಶವಿರೋಧಿ ಮುಸ್ಲಿಮರ ನಡೆಯನ್ನು ಸಮುದಾಯದ ಯಾವುದೇ ಓರ್ವ ನಾಯಕನೂ ಖಂಡಿಸಿಲ್ಲ. ಆದ್ದರಿಂದ ಇಸ್ಲಾಮ್ ಧರ್ಮದಲ್ಲಿ ನನಗೆ ನಂಬಿಕೆ ಹೋಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.

ಅಲಿ ಅವರಿಗೆ ಹಲವಾರು ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಇತ್ತೀಚೀನ ಮಾಹಿತಿಯ ಪ್ರಕಾರ ಆ ವಿಡಿಯೋ ಸಾಮಾಜಿಕ ಜಾಲತಾಣದಿಂದ ಕಾಣೆಯಾಗಿದೆ ಆದರೆ ವಾಟ್ಸ್ ಆಪ್ ಗಳಲ್ಲಿ ವೈರಲ್ ಆಗತೊಡಗಿದೆ. 

ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ನಿಧನವನ್ನು ಸಂಭ್ರಮಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಲಿ ಅಕ್ಬರ್ ವಿಡಿಯೋದಲ್ಲಿ ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com