ಸರ್ಕಾರಿ ಕಾರ್ಯಕ್ರಮಕ್ಕೆ ಗೈರಾದ 11 ಅಧಿಕಾರಿಗಳ ವೇತನ ಸ್ಥಗಿತಗೊಳಿಸುವಂತೆ ಮುಜಾಫರ್‌ನಗರ ಜಿಲ್ಲಾಧಿಕಾರಿ ಆದೇಶ

ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವ ಸಲುವಾಗಿ ನಡೆದ 'ಸಂಪೂರ್ಣ ಸಮಾಧಾನ್ ದಿವಸ್‌' ಕಾರ್ಯಕ್ರಮಕ್ಕೆ ಗೈರುಹಾಜರಾದ 11 ಅಧಿಕಾರಿಗಳ ವೇತನ ಸ್ಥಗಿತಗೊಳಿಸುವಂತೆ ಮುಜಾಫರ್‌ನಗರ ಜಿಲ್ಲಾಧಿಕಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಜಾಫರ್‌ನಗರ: ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವ ಸಲುವಾಗಿ ನಡೆದ 'ಸಂಪೂರ್ಣ ಸಮಾಧಾನ್ ದಿವಸ್‌' ಕಾರ್ಯಕ್ರಮಕ್ಕೆ ಗೈರುಹಾಜರಾದ 11 ಅಧಿಕಾರಿಗಳ ವೇತನ ಸ್ಥಗಿತಗೊಳಿಸುವಂತೆ ಮುಜಾಫರ್‌ನಗರ ಜಿಲ್ಲಾಧಿಕಾರಿ ಸಿ ಬಿ ಸಿಂಗ್ ಅವರು ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಇಲ್ಲಿನ ಬುಧಾನ ತಹಸಿಲ್ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ 'ಸಂಪೂರ್ಣ ಸಮಾಧಾನ್ ದಿವಸ್‌' ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಮತ್ತು ಎಸ್‌ಎಸ್‌ಪಿ ಅಭಿಷೇಕ್ ಯಾದವ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಜನರಿಂದ 49 ದೂರುಗಳು ಬಂದಿವೆ.

ಈ ವೇಳೆ ವಿವಿಧ ಇಲಾಖೆಗಳ 11 ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದು, ಅವರ ವೇತನವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com