The New Indian Express
ನವದೆಹಲಿ: ಚುನಾವಣಾಗ್ರಸ್ಥ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕರ ಮನೆಗಳ ಮೇಲೆ ಐಟಿ ದಾಳಿಯಾದ ಎರಡು ದಿನಗಳ ತರುವಾಯ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಅವರ ಜೊತೆಗೆ ಕುಳಿತಿರುವ ಫೋಟೊ ಬಿಡುಗಡೆಯಾಗಿ ವಿವಾದ ಸೃಷ್ಟಿಸಿದೆ.
ಇದನ್ನೂ ಓದಿ: ವಾರಾಣಸಿಯಿಂದ ವಡಿಪಟ್ಟಿವರೆಗೆ ಪವಿತ್ರ ಗೋವುಗಳಿವೆ, ಅವುಗಳನ್ನು ಕೆಣಕುವ ಧೈರ್ಯಮಾಡಬೇಡಿ: ಹೈಕೋರ್ಟ್
ವಿವಾದ ಕುರಿತಾಗಿ ಸ್ಪಷ್ಟನೆ ನೀಡಿರುವ ಪಕ್ಷ ಈ ಫೋಟೊ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಆರತಕ್ಷತೆ ಸಂದರ್ಭದಲ್ಲಿ ತೆಗೆದಿದ್ದೆಂದು ಹೇಳಿ ಪರಿಸ್ಥಿತಿ ತಣ್ಣಗಾಗಿಸಲು ಯತ್ನಿಸಿದೆ.
ಇದನ್ನೂ ಓದಿ: ಮತದಾರರ ಪಟ್ಟಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಚುನಾವಣಾ ಅಕ್ರಮಕ್ಕೆ ತಡೆ: ಸರ್ಕಾರಿ ಮೂಲಗಳು
ಈ ಫೋಟೋವನ್ನು ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಅವರು ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಅರ್ಜುನ್ ಅವರು ತಮ್ಮ ಜನ್ಮದಿನದ ಸಂದರ್ಭ ಭಾಗವತ್ ಅವರ ಆಶೀರ್ವಾದ ಪಡೆಯಲು ಮುಂದಾಗಿದ್ದರು. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚ್ಕೊಂಡಿದ್ದರು. ಆ ಫೋಟೋದ ಇನ್ನೊಂದು ಬದಿಯಲ್ಲಿ ಮುಲಾಯಂ ಅವರು ಆಸೀನರಾಗಿದ್ದು ಇದೀಗ ವಿವಾದ ಸೃಷ್ಟಿಸಿದೆ.
ಇದನ್ನೂ ಓದಿ: ಭಾರತ ಕುರಿತು ಅಪಪ್ರಚಾರ: 20 ಯೂಟ್ಯೂಬ್ ಚಾನೆಲ್, ಎರಡು ವೆಬ್ ಸೈಟ್ ನಿಷೇಧ
ಈ ಕುರಿತಾಗಿ ಟೀಕಿಸಿರುವ ಉತ್ತರಪ್ರದೇಶ ಕಾಂಗ್ರೆಸ್ ಎಸ್ ಪಿ ಪಕ್ಷದ ಹೆಸರಿನಲ್ಲಿ ಎಸ್ ಎಂದರೆ ಸಂಘವಾದ ಇರಬೇಕು ಎಂದು ಅಣಕವಾಡಿದೆ.
ಇದನ್ನೂ ಓದಿ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ: ಮುಂಚೂಣಿಯಲ್ಲಿ ಟಿಎಂಸಿ; ಬಿಜೆಪಿ, ಕಾಂಗ್ರೆಸ್, ಸಿಪಿಎಂ ಮೂಲೆಗುಂಪು ಎಂದ ಮಮತಾ ಬ್ಯಾನರ್ಜಿ