ಸೇನೆಯಿಂದ ನಾಗರಿಕರ ಹತ್ಯೆ; ನಾಗಾಲ್ಯಾಂಡ್ನಿಂದ ಎಎಫ್ಎಸ್ಪಿಎ ವಾಪಸ್, ಸಮಿತಿಗೆ ಒಪ್ಪಿಗೆ ನೀಡಿದ ಅಮಿತ್ ಶಾ
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು(ಎಎಫ್ಎಸ್ಪಿಎ) ರಾಜ್ಯದಿಂದ ಹಿಂತೆಗೆದುಕೊಳ್ಳುವ ಕುರಿತು ಶೀಘ್ರದಲ್ಲೇ ಸಮಿತಿಯನ್ನು ರಚಿಸಲಾಗುವುದು ಎಂದು ನಾಗಾಲ್ಯಾಂಡ್ ಸರ್ಕಾರ ತಿಳಿಸಿದೆ.
Published: 26th December 2021 05:17 PM | Last Updated: 26th December 2021 05:17 PM | A+A A-

ಅಮಿತ್ ಶಾ
ನವದೆಹಲಿ: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು(ಎಎಫ್ಎಸ್ಪಿಎ) ರಾಜ್ಯದಿಂದ ಹಿಂತೆಗೆದುಕೊಳ್ಳುವ ಕುರಿತು ಶೀಘ್ರದಲ್ಲೇ ಸಮಿತಿಯನ್ನು ರಚಿಸಲಾಗುವುದು ಎಂದು ನಾಗಾಲ್ಯಾಂಡ್ ಸರ್ಕಾರ ತಿಳಿಸಿದೆ.
ಡಿಸೆಂಬರ್ 23 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮಿತಿಯ ರಚನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ನಾಗಾಲ್ಯಾಂಡ್ ಉಪ ಮುಖ್ಯಮಂತ್ರಿ ವೈ ಪ್ಯಾಟನ್, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ನಾಗಾ ಪೀಪಲ್ಸ್ ಫ್ರಂಟ್ ಲೆಜಿಸ್ಲೇಚರ್ ಪಾರ್ಟಿ (ಎನ್ಪಿಎಫ್ಎಲ್ಪಿ) ನಾಯಕ ಟಿಆರ್ ಝೆಲಿಯಾಂಗ್ ಕೂಡ ಇದ್ದರು.
ಇದನ್ನೂ ಓದಿ: ನಾಗಾಲ್ಯಾಂಡ್ ಹತ್ಯೆ: ಬದುಕಿ ಉಳಿದವರ ಸ್ಥಿತಿ ಗಂಭೀರ; ಮಾಧ್ಯಮಗಳೊಂದಿಗೆ ಮಾತನಾಡದಂತೆ ಸಂಬಂಧಿಕರಿಗೆ ಸೂಚನೆ
ಡಿ. 4 ರಂದು ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳು ಕೆಲವು ನಾಗರಿಕರನ್ನು ಕೊಂದ ನಂತರ ಸಭೆ ನಡೆಸಲಾಯಿತು.
ಡಿಸೆಂಬರ್ 4 ರಂದು ನಾಗಾಲ್ಯಾಂಡ್ನ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಕನಿಷ್ಠ 14 ನಾಗರಿಕರು ಮತ್ತು ಓರ್ವ ಯೋಧ ಸಾವಿಗೀಡಾಗಿದ್ದ. ಓರ್ವ ಯೋಧ ಕೂಡ ಸಾವನ್ನಪ್ಪಿದ್ದಾರೆ.
ಎಎಫ್ಎಸ್ಪಿಎ ಸಮಿತಿ ಏನು ಮಾಡುತ್ತದೆ? ಸಮಿತಿಯು 45 ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ನಾಗಾಲ್ಯಾಂಡ್ನಿಂದ ತೊಂದರೆಗೊಳಗಾದ ಪ್ರದೇಶಗಳನ್ನು ಹಿಂಪಡೆಯಲು ಮತ್ತು ಎಎಫ್ಎಸ್ಪಿಎ ಅನ್ನು ಪ್ರಾರಂಭಿಸಲಾಗುವುದು.
ಇದಲ್ಲದೆ, ಓಟಿಂಗ್ ಘಟನೆಯಲ್ಲಿ ಭಾಗಿಯಾಗಿರುವ ಸೇನಾ ಘಟಕದ ವಿರುದ್ಧ ವಿಚಾರಣೆಯ ನ್ಯಾಯಾಲಯವು ಶಿಸ್ತು ಕ್ರಮಗಳನ್ನು ಪ್ರಾರಂಭಿಸುತ್ತದೆ. ಅಲ್ಲಿಯವರೆಗೆ ವಿಚಾರಣೆ ಎದುರಿಸುತ್ತಿರುವ ಸೇನಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗುವುದು.
ಇದನ್ನೂ ಓದಿ: ನಾಗಾಲ್ಯಾಂಡ್ ನಲ್ಲಿ ಪ್ರಜೆಗಳ ಹತ್ಯೆ: ಮೃತ ದೇಹವನ್ನು ಟಾರ್ಪಲ್ ಅಡಿ ಬಚ್ಚಿಡಲು ಯತ್ನಿಸಿದ್ದ ಸೇನೆ- ಸರ್ಕಾರ
ಓಟಿಂಗ್ ಘಟನೆಯಲ್ಲಿ ಮೃತಪಟ್ಟವರ ಮುಂದಿನ ಸಂಬಂಧಿಕರಿಗೂ ರಾಜ್ಯ ಸರ್ಕಾರ ಉದ್ಯೋಗ ನೀಡಲಿದೆ. ಸಶಸ್ತ್ರ ಪಡೆಗಳು (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರಗಳ ಸುಗ್ರೀವಾಜ್ಞೆ 1958 ಅನ್ನು ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಮೇ. 22, 1958 ರಂದು ಪ್ರಕಟಿಸಿದರು. ಇದನ್ನು ಸೆಪ್ಟೆಂಬರ್ 11, 1958 ರಂದು ಸಶಸ್ತ್ರ ಪಡೆಗಳ (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರಗಳ ಕಾಯ್ದೆ, 1958 ರಿಂದ ಬದಲಾಯಿಸಲಾಯಿತು.