
ನವಜೋತ್ ಸಿಂಗ್ ಸಿಧು
ನವದೆಹಲಿ: ಇತಿಹಾಸದಿಂದ ಪಾಠ ಕಲಿಯಿರಿ... ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಕೇಂದ್ರ ಸರಕಾರವು ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ತಡೆ ನೀಡಬೇಕೆಂದು ಗಣರಾಜ್ಯೋತ್ಸವ ದಿನವಾದ ಇಂದು ರೈತರು ಟ್ರಾಕ್ಟರ್ ಪರೇಡ್ ನಡೆಸಿದ್ದರು. ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ್ದು, ಭಾರತದ ಐತಿಹಾಸಿಕ ಸ್ಮಾರಕ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಕಾರರು ಅಲ್ಲಿ ತಮ್ಮ ಧ್ವಜವನ್ನು ನೆಟ್ಟಿದ್ದರು.
If you don’t learn your lessons from history, it repeats itself ... History tells us “No Government has ever won against the Farmers.“
— Navjot Singh Sidhu (@sherryontopp) January 26, 2021
ರೈತರ ಟ್ರಾಕ್ಟರ್ ರ್ಯಾಲಿ ಮತ್ತು ಹಿಂಸಾಚಾರದ ಕುರಿತು ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, 'ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ. ನೀವು ಇತಿಹಾಸದಿಂದ ಪಾಠ ಕಲಿಯಬೇಕು. ಇಲ್ಲದಿದ್ದರೆ ಇತಿಹಾಸವು ಮರುಕಳಿಸುತ್ತಲೇ ಇರುತ್ತದೆ. ಇತಿಹಾಸವು ನಮಗೆ ಹೇಳುವುದೇನೆಂದರೆ, ರೈತರ ವಿರುದ್ಧ ಯಾವ ಸರ್ಕಾರವೂ ಗೆಲುವು ಪಡೆದ ಚರಿತ್ರೆಯಿಲ್ಲ ಎಂದಾಗಿದೆ ಎಂದು ಸಿಧು ಟ್ವೀಟ್ ಮಾಡಿದ್ದಾರೆ.
ರೈತರು ಎರಡು ತಿಂಗಳುಗಳ ಕಾಲ ಚಳಿಯಲ್ಲಿ ಕುಳಿತು ಸಾವಧಾನದಿಂದ, ತಾಳ್ಮೆಯಿಂದ ಸರ್ಕಾರವು ಕಾಯ್ದೆಯನ್ನು ಹಿಂಪಡೆಯುತ್ತದೆಯೇ ಎಂದು ಕಾದರು. ಆದರೆ ಯಾವುದೇ ಬದಲಾವಣೆ ಉಂಟಾಗಲಿಲ್ಲ. ಹೃದಯವೇ ಇಲ್ಲದ ಸರ್ಕಾರ ರೈತರ ದನಿಗೆ ಕಿವಿಯಾಗಲಿಲ್ಲ. ಇದೀಗ ರೈತರ ಸಯಮದ ಕಟ್ಟೆ ಹೊಡೆದಿದೆ ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.