social_icon

ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿರುವ ಪ್ರಧಾನಿ ಅವರನ್ನು ಕ್ಯಾಬಿನೆಟ್ ನಿಂದ ಮೊದಲು ತೆಗೆಯಬೇಕಿತ್ತು: ಕಾಂಗ್ರೆಸ್

ಕೇಂದ್ರ ಸಚಿವ ಸಂಪುಟ ಪುನರ್ರಚನೆ ಮೂಲಕ ಅಧಿಕಾರದ ಲೂಟಿಯ ವಿತರಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Published: 07th July 2021 09:22 PM  |   Last Updated: 07th July 2021 09:46 PM   |  A+A-


Randeep Surjewala

ರಂದೀಪ್ ಸಿಂಗ್ ಸುರ್ಜೇವಾಲಾ

PTI

ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನರ್ರಚನೆ ಮೂಲಕ ಅಧಿಕಾರದ ಲೂಟಿಯ ವಿತರಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ವಿಸ್ತರಣೆಯನ್ನು ಕಾರ್ಯಕ್ಷಮತೆ ಆಧಾರದಲ್ಲಿ ಮಾಡಲಾಗಿಲ್ಲ. ಆದರೆ 'ಅಧಿಕಾರದ ಲೂಟಿಗಳ ವಿತರಣೆ ಮತ್ತು ಪಕ್ಷಾಂತರರ ಹೊಂದಾಣಿಕೆ'ಯಾಗಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ ಹೇಳಿದ್ದಾರೆ. 

ಸಂಪುಟ ವಿಸ್ತರಣೆಯನ್ನು ಕಾರ್ಯಕ್ಷಮತೆಯ ಆಧಾರದ ಮೇಲೆ ಮಾಡಲಾಗಿಲ್ಲ. ಇದಕ್ಕೆ ಕಾರಣ ಉತ್ತಮ ಆಡಳಿತ ಒದಗಿಸುವಲ್ಲಿ ವಿಫಲವಾಗಿರುವ ಪ್ರಧಾನಿ ಮೋದಿ ಅವರನ್ನು ಕ್ಯಾಬಿನೆಟ್ ನಿಂದ ಮೊದಲು ತೆಗೆದುಹಾಕಬೇಕಿತ್ತು. ಇದರ ಜೊತೆಗೆ ಹಣಕಾಸು ಸಚಿವರು, ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಕೂಡ ತಮ್ಮ ಪಾತ್ರಗಳಲ್ಲಿ ವಿಫಲರಾಗಿದ್ದರಿಂದ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕಿತ್ತು ಎಂದು ಹೇಳಿದರು. 

'ಒಟ್ಟಾರೆಯಾಗಿ, ಈ ಸಂಪುಟ ವಿಸ್ತರಣೆಯು ಕಾರ್ಯಕ್ಷಮತೆಯ ಮೌಲ್ಯಮಾಪನವಲ್ಲ. ಇದು ಅವರ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳನ್ನು ಪೂರೈಸುವ ಸಾಧನವಾಗಿದೆ ಹೊರತು ದೇಶಕ್ಕಾಗಿ ಅಲ್ಲ. ಆದರೆ ರಾಷ್ಟ್ರವನ್ನು ಬಡತನದ ಅಂಚಿಗೆ ತಂದ ಪ್ರಧಾನಿ ಮೋದಿಯವರ ಕಾರ್ಯಕ್ಷಮತೆಯ ಮೌಲ್ಯಮಾಪನ ಯಾವಾಗ? ಕೊರೋನಾ ಸಾಂಕ್ರಾಮಿಕ ರೋಗದಲ್ಲಿ ತನ್ನ ಜವಾಬ್ದಾರಿಯಿಂದ ದೂರವಾಗಿದ್ದಾರೆ ಎಂದು ಆರೋಪಿಸಿದರು. 

'ಪ್ರಗತಿ, ಶಾಂತಿ ಮತ್ತು ಸಾಮರಸ್ಯವನ್ನು ಇತಿಹಾಸದ ಕಸದಬುಟ್ಟಿಗೆ ಎಸೆಯಲಾಗಿದೆ. ಈಗಿನ ಪ್ರಧಾನ ಮಂತ್ರಿಯನ್ನು ಒಬ್ಬ ನಿರಂಕುಶಾಧಿಕಾರಿ. ಭಾರತದ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ. ಭಾರತವನ್ನು ನಿರುದ್ಯೋಗದ ಪ್ರಪಾತಕ್ಕೆ ತಳ್ಳಲಾಗಿದೆ. 21ನೇ ಶತಮಾನದ ಸೂಪರ್ ಶಕ್ತಿ ಭಾರತವನ್ನು ತೀವ್ರವಾಗಿ ದುರ್ಬಲಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.

ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗಿನ ಗಡಿ ನಿಲುವನ್ನು ನಿಭಾಯಿಸುವಲ್ಲಿನ ವಿಫಲ. ನಕ್ಸಲಿಸಂನ ಮುಂದುವರಿದ ಸಮಸ್ಯೆ. ಭಯೋತ್ಪಾದನೆ ಮತ್ತು ಕಳಪೆ ಆರ್ಥಿಕ ಸ್ಥಿತಿ ಎಂದು ಆರೋಪಿಸಿದ್ದಾರೆ. 


Stay up to date on all the latest ದೇಶ news
Poll
Dk shivakumar

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನಗಳ ಗಡಿ ದಾಟುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.


Result
ಒಪ್ಪುತ್ತೇನೆ
ಒಪ್ಪುವುದಿಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp