ಹಣ ನೀಡಲು ನಿರಾಕರಿಸಿದ ಪೋಷಕರು: ಲಿಂಗಪರಿವರ್ತಿತ ವ್ಯಕ್ತಿ ಸೇರಿ ಇಬ್ಬರಿಂದ ಹೆಣ್ಣು ಮಗುವಿನ ಕೊಲೆ!

ಮೂರು ತಿಂಗಳ ಹೆಣ್ಣು ಮಗುವನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿ ಕಾಲುವೆಗೆ ಎಸೆದು ಕೊಂದಿರುವ  ಘಟನೆ ಮುಂಬೈನಲ್ಲಿ ನಡೆದಿದ್ದು ಅವರಲ್ಲಿ ಓರ್ವ ಲಿಂಗಪರಿವರ್ತಿತ ವ್ಯಕ್ತಿ ಎನ್ನಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಮೂರು ತಿಂಗಳ ಹೆಣ್ಣು ಮಗುವನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿ ಕಾಲುವೆಗೆ ಎಸೆದು ಕೊಂದಿರುವ  ಘಟನೆ ಮುಂಬೈನಲ್ಲಿ ನಡೆದಿದ್ದು ಅವರಲ್ಲಿ ಓರ್ವ ಲಿಂಗಪರಿವರ್ತಿತ ವ್ಯಕ್ತಿ ಎನ್ನಲಾಗಿದೆ. 

ಮಗುವಿನ ಪೋಷಕರು ಸ್ವಲ್ಪ ಹಣ, ತೆಂಗಿನಕಾಯಿ ಮತ್ತು ಸೀರೆ ನೀಡಬೇಕೆಂಬ ತಮ್ಮ ಬೇಡಿಕೆ ಈಡೇರಿಸದ ಕಾರಣ ಆರೋಪಿಗಳು ಮಗುವನ್ನು ಎಸೆದಿರುವುದಾಗಿ  ದಕ್ಷಿಣ ಮುಂಬೈ, ಪೊಲೀಸರು ಹೇಳಿದ್ದಾರೆ.

ಗುರುವಾರ ಸಂಜೆ ನಾಪತ್ತೆಯಾಗಿದ್ದ ಮಗುವಿನ ಶವವನ್ನು ಕಾಲುವೆಯಲ್ಲಿ ಗುರುತಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ,ಯೊಬ್ಬ ಲಿಂಗಪರಿವರ್ತಿತನಾಗಿದ್ದು ಮಗುವನ್ನು ಮನೆಗೆ ಹಿಂದಿರುಗಿಸಲು ಭೇಟಿ ನೀಡಿದ್ದಾಳೆ. ಆ ವೇಳೆ ಪೋಷಕರಿಂದ ಸ್ವಲ್ಪ ನಗದು, ತೆಂಗಿನಕಾಯಿ ಮತ್ತು ಸೀರೆಯನ್ನು ಉಡುಗೊರೆಯಾಗಿ ಕೋರಿದ್ದಾಳೆ. ಆದರೆ ಮಗುವಿನ ಪೋಷಕರಿ ಇದನ್ನು ನೀಡಲು ಒಪ್ಪಿರಲಿಲ್ಲ. ತೀವ್ರ ವಾಗ್ವಾದದ ಬಳಿಕ  , ಆರೋಪಿ ಗುರುವಾರ ಸಂಜೆ ಮಗುವನ್ನು ಅಪಹರಿಸಿ ಕಾಲುವೆಗೆ ಎಸೆದಿದ್ದಾಳೆ. ಮಗುವಿನ ಕುಟುಂಬವು ಮಗುವಿಗಾಗಿ ಹುಡುಕಿ ಬಳಿಕ ಪೊಲೀಸರಿಗೆ ದೂರು ನೀಡಿದೆ.

ಆರಂಭದಲ್ಲಿ, ಅಪಹರಣದ ಪ್ರಕರಣ ದಾಖಲಾಗಿದ್ದರೂ, ಮಗುವಿನ ಶವವನ್ನು ವಶಕ್ಕೆ ಪಡೆದ ನಂತರ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳ ಬೇಟೆಯಾಡಿ ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com