ಭಾರತದಲ್ಲಿನ ಮಾನವ ಹಕ್ಕುಗಳ ಸಮಸ್ಯೆ ಕುರಿತು ಮಂಕಾದ ಅಮೆರಿಕ! ವಿದೇಶಾಂಗ ನೀತಿಯ ದೊಡ್ಡ ಕಾರ್ಯತಂತ್ರವೇ?

ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಜೊತೆಗಿನ ಸಭೆ ವೇಳೆಯಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸುವ ನಿರೀಕ್ಷೆಯಿತ್ತು. ಆದರೆ, ಸಭೆಯ ನಂತರ ಎಲ್ಲಾ ಪ್ರಜಾಸತಾತ್ಮಕ ಕೆಲಸಗಳು ಪ್ರಗತಿಯಲ್ಲಿರುವುದಾಗಿ ಅಮೆರಿಕದ ಅಧಿಕಾರಿ ಹೇಳುವ ಮೂಲಕ ಅಂತಹ ನಿರೀಕ್ಷೆಗಳೆಲ್ಲಾ ಸುಳ್ಳಾಯಿತು.
ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್, ವಿದೇಶಾಂಗ ಸಚಿವ ಎಸ್. ಜೈಶಂಕರ್
ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್, ವಿದೇಶಾಂಗ ಸಚಿವ ಎಸ್. ಜೈಶಂಕರ್

ನವದೆಹಲಿ: ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಜೊತೆಗಿನ ಸಭೆ ವೇಳೆಯಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸುವ ನಿರೀಕ್ಷೆಯಿತ್ತು. ಆದರೆ, ಸಭೆಯ ನಂತರ ಎಲ್ಲಾ ಪ್ರಜಾಸತಾತ್ಮಕ ಕೆಲಸಗಳು ಪ್ರಗತಿಯಲ್ಲಿರುವುದಾಗಿ ಅಮೆರಿಕದ ಅಧಿಕಾರಿ ಹೇಳುವ ಮೂಲಕ ಅಂತಹ ನಿರೀಕ್ಷೆಗಳೆಲ್ಲಾ ಸುಳ್ಳಾಯಿತು.

ಜೋ ಬೈಡೆನ್ ಈ ವರ್ಷ ಅಧಿಕಾರ ವಹಿಸಿಕೊಂಡಾಗ, ಡೊನಾಲ್ಡ್ ಟ್ರಂಪ್ ಅವರಂತೆ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗಾಗಿ ಭಾರತವನ್ನು ಕೆಣಕಲು ಹಿಂಜರಿಯುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಹಾಗಾದರೆ ಏಕೆ ಈ ವಿಚಾರ ಕುರಿತು ಅಷ್ಟಾಗಿ ಮಾತನಾಡಿಲ್ಲ? ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧದ ಹಲವು ಅಂಶಗಳನ್ನು ತೊಂದರೆಗೊಳಿಸಲು ಬಯಸುವುದಿಲ್ಲವಾದ್ದರಿಂದ ಯುಎಸ್ ಭಾರತದ ವಿರುದ್ಧ ತುಂಬಾ ಕಠಿಣ ಅಥವಾ ವಿಮರ್ಶಾತ್ಮಕ ಹೆಜ್ಜೆ ಇಡಲಿದೆ. 1990 ಮತ್ತು 2000 ಆರಂಭಕ್ಕೆ ಹೋಲಿಸಿದರೆ ಭಾರತದ ಧ್ವನಿ ಎತ್ತಿರುವುದರಲ್ಲಿ ಅಮೆರಿಕಕ್ಕೆ ಹೆಚ್ಚಿನ ಪಾಲಿದೆ ಎಂದು ಪ್ರಮುಖ ಥಿಂಕ್-ಟ್ಯಾಂಕ್ ಸಂಶೋಧನಾ ವಿದ್ವಾಂಸರೊಬ್ಬರು ಹೇಳಿದ್ದಾರೆ.

ಆದಾಗ್ಯೂ, ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಇತ್ತೀಚಿನ ಅಮೆರಿಕದ ಮಧ್ಯಸ್ಥಿಕೆಗಳ ಐತಿಹಾಸಿಕ ಅನುಭವದಿಂದ ಬ್ಲಿಂಕನ್‌ ಅವರಲ್ಲಿ ಮಾನವೀಯತೆ ಉಂಟಾಗಿರಬಹುದೆಂದು ಕೆಲವು ತಜ್ಞರು ವಾದಿಸುತ್ತಾರೆ. 1980ರಲ್ಲಿ ಸೋವಿಯತ್ ಯೂನಿಯನ್ ಸೋಲಿಸಲು ಅಮೆರಿಕ ಅಪ್ಘಾನಿಸ್ಥಾನದಲ್ಲಿ ಮುಜಾಹಿದ್ದೀನ್ ಜೊತೆಗೆ ಕೆಲಸ ಮಾಡುತಿತ್ತು. ಆದರೆ, ಸೋವಿಯತ್ ಯೂನಿಯನ್ ಪತನದ ನಂತರ ಯುನೈಟೆಡ್ ಸ್ಟೇಟ್ಸ್ ಚೆಂಡನ್ನು ಅಫ್ಘಾನಿಸ್ತಾನದಲ್ಲಿ ಕೈಬಿಟ್ಟಿತು ಮತ್ತು 9/11 ಭಯೋತ್ಪಾದಕ ದಾಳಿಯ ನಂತರ ಮಾತ್ರ ಮರಳಿತು.

ಸುಮಾರು ಎರಡು ದಶಕಗಳ ನಂತರ ಅಮೆರಿಕ ಅಪ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಪಡೆದಿದ್ದು, ತಾಲಿಬಾನ್ ಗೆ ಜಾಗ ಮಾಡಿಕೊಟ್ಟಿದೆ. ಇತರ ಸರ್ವಾಧಿಕಾರಿ ಗುಂಪುಗಳಂತೆ ತಾಲಿಬಾನ್ ರಾಜಕೀಯ ಸ್ವಾತಂತ್ರ್ಯಗಳನ್ನು ನಿರಾಕರಿಸುವುದಲ್ಲದೇ, ಆದರೆ ಅದು ಜನರ ಸಾಮಾಜಿಕ ಜೀವನ ಮತ್ತು ವೈಯಕ್ತಿಕ ಉಡುಪು ಆಯ್ಕೆಗಳನ್ನು ಸಹ ವ್ಯಾಖ್ಯಾನಿಸಲು ಪ್ರಯತ್ನಿಸುತ್ತದೆ. ಅಂತೆಯೇ, ಸುದೀರ್ಘವಾದ ಯುಎಸ್ ಹಸ್ತಕ್ಷೇಪದ ನಂತರ, ಇರಾಕ್‌ನ ನಾಗರಿಕರು ಪೂರ್ಣವಾಗಿ ಮಾನವ ಹಕ್ಕುಗಳು ಮತ್ತು ರಾಜಕೀಯ ಸ್ವಾತಂತ್ರ್ಯಗಳನ್ನು ಅನುಭವಿಸುತ್ತಾರೆಯೇ ಎಂಬ ಅನುಮಾನವಿದೆ ಎಂದು ದೆಹಲಿ ಪಾಲಿಸಿ ಗ್ರೂಪ್‌ನ ಹಿರಿಯ ಸದಸ್ಯ ಸಂಜಯ್ ಪುಲಿಪಾಕ ಹೇಳಿದ್ದಾರೆ.

ಬರಾಕ್ ಒಬಾಮಾರಂತಹ ಮಾಜಿ ಅಮೆರಿಕ ಅಧ್ಯಕ್ಷರು ಮಾನವ ಹಕ್ಕುಗಳ ವಿಚಾರದಲ್ಲಿ ಭಾರತಕ್ಕೆ ಕರೆ ನೀಡಿದ್ದರು. ಧಾರ್ಮಿಕ ನಂಬಿಕೆಯ ಹಾದಿಯಲ್ಲಿ ವಿಭಜನೆಯಾಗದಷ್ಟು ಕಾಲ ಭಾರತ ಯಶಸ್ವಿಯಾಗುತ್ತದೆ . ಅದು ಯಾವುದೇ ಮಾರ್ಗದಲ್ಲಿ ವಿಭಜನೆಯಾಗದಿದ್ದಾಗ ಒಂದೇ ರಾಷ್ಟ್ರವಾಗಿ ಏಕೀಕರಿಸಲ್ಪಟ್ಟಿದೆ ಎಂದು 2015 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಬರಾಕ್ ಒಬಾಮಾ ಹೇಳಿದ್ದರು. ಕಾಶ್ಮೀರ ಪರಿಸ್ಥಿತಿ ಬಗ್ಗೆ ಸೆನೆಟರ್ ಎಲ್ಲರೂ ಕಾಳಜಿಯ ಧ್ವನಿ ಎತ್ತಿದ್ದಾರೆ. ಭಾರತದ ವಿರುದ್ಧ ಟೀಕೆಯನ್ನು ಕಡಿಮೆ ಮಾಡಿರುವುದು ದೊಡ್ಡ ವಿದೇಶಾಂಗ ನೀತಿಯ ಕಾರ್ಯತಂತ್ರವಾಗಿದೆ ಎಂದು ಪುಲಿಪಾಕ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com