ಈಶ್ಯಾನ್ಯ ಭಾರತ ಎಂದಿಗೂ ಒಗ್ಗಟ್ಟಿನಿಂದ ಇರಲಿದೆ: ಮಿಜೋರಾಮ್ ಸಿಎಂ

ಈಶಾನ್ಯ ಭಾರತ ಎಂದಿಗೂ ಒಂದಾಗಿರಲಿದೆ ಎಂದು ಮಿಜೊರಾಮ್ ಸಿಎಂ ಜೊರಾಮ್ತಾಂಗ ಹೇಳಿದ್ದಾರೆ. 
ಮಿಜೋರಾಮ್ ಸಿಎಂ
ಮಿಜೋರಾಮ್ ಸಿಎಂ

ನವದೆಹಲಿ: ಈಶಾನ್ಯ ಭಾರತ ಎಂದಿಗೂ ಒಂದಾಗಿರಲಿದೆ ಎಂದು ಮಿಜೊರಾಮ್ ಸಿಎಂ ಜೊರಾಮ್ತಾಂಗ ಹೇಳಿದ್ದಾರೆ. 

ಮಿಜೋರಾಮ್ ನ ನೆರೆ ರಾಜ್ಯ ಅಸ್ಸಾಂ ನೊಂದಿಗೆ ಘರ್ಷಣೆ ಉಂಟಾಗಿರುವ ಸಂದರ್ಭದಲ್ಲಿ ಮಿಜೋರಾಮ್ ಸಿಎಂ ಜೊರಾಮ್ತಾಂಗ ಈ ಹೇಳಿಕೆ ನೀಡಿದ್ದಾರೆ.

ಟ್ವಿಟರ್ ನಲ್ಲಿ ತಮ್ಮ ಸರ್ಕಾರದ ನೊಟಿಫಿಕೇಶನ್ ಒಂದನ್ನು ಜೊರಾಮ್ತಾಂಗ ಹಂಚಿಕೊಂಡಿದ್ದು, ಕೊಲಾಸಿಬ್ ಜಿಲ್ಲೆಗೆ ಮಿಜೋರಾಮ್ ನಾಗರಿಕರಲ್ಲದವರಿಗೆ ಪ್ರವೇಶಕ್ಕೆ ಯಾವುದೇ ನಿರ್ಬಂಧವನ್ನೂ ವಿಧಿಸಿಲ್ಲ, ಈಶಾನ್ಯ ಭಾರತ ಎಂದಿಗೂ ಒಂದಾಗಿರಲಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಅಸ್ಸಾಂ ರಾಜ್ಯ ಮಿಜೊರಾಮ್ ಗೆ ಪ್ರಯಾಣಿಸದಂತೆ ತನ್ನ ನಾಗರಿಕರಿಗೆ ಪ್ರಯಾಣ ಸಲಹೆಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೆ ಮಿಜೊರಾಮ್ ಸಿಎಂ ಈ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com