ಭಾರತಕ್ಕೆ ತ್ವರಿತ ಮತ್ತು ಸಮಗ್ರ ವ್ಯಾಕ್ಸಿನೇಷನ್ ಬೇಕೇ ಹೊರತು ಬಿಜೆಪಿಯ ಸುಳ್ಳಲ್ಲ: ರಾಹುಲ್ ಗಾಂಧಿ

ಸರ್ಕಾರದ ನಿಷ್ಕ್ರಿಯತೆಯಿಂದ ಉಂಟಾಗುವ ಲಸಿಕೆ ಕೊರತೆಯನ್ನು ನೀಗಿಸಲು ಭಾರತಕ್ಕೆ ತ್ವರಿತ ಮತ್ತು ಸಂಪೂರ್ಣ ವ್ಯಾಕ್ಸಿನೇಷನ್ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ಸರ್ಕಾರದ ನಿಷ್ಕ್ರಿಯತೆಯಿಂದ ಉಂಟಾಗುವ ಲಸಿಕೆ ಕೊರತೆಯನ್ನು ನೀಗಿಸಲು ಭಾರತಕ್ಕೆ ತ್ವರಿತ ಮತ್ತು ಸಂಪೂರ್ಣ ವ್ಯಾಕ್ಸಿನೇಷನ್ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸರ್ಕಾರದ ಅಸಮರ್ಥತೆಯನ್ನು ಮರೆಮಾಚಲು ಮತ್ತು ಪ್ರಧಾನಿ ಮೋದಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಕಾಪಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಈ ಪ್ರಯತ್ನ ವೈರಸ್ ಗೆ ಅನುಕೂಲವಾಗುವಂತೆ ಮತ್ತು ಜನರ ಪ್ರಾಣವನ್ನು ಕಳೆದುಕೊಳ್ಳುವ ಪ್ರಯತ್ನಗಳಾಗಿವೆ. ಹೀಗಾಗಿ  ಭಾರತಕ್ಕೆ ತ್ವರಿತ ಮತ್ತು ಸಂಪೂರ್ಣ ವ್ಯಾಕ್ಸಿನೇಷನ್ ಅಗತ್ಯವಿದೆಯೇ ಹೊರತು ಬಿಜೆಪಿಯ "ಸುಳ್ಳು ಮತ್ತು ಪ್ರಾಸಬದ್ಧ ಘೋಷಣೆಗಳ ಬ್ರಾಂಡ್" ಅಲ್ಲ ಎಂದು ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಕೋವಿಡ್-19 ರ ವಿನಾಶಕಾರಿ 2ನೇ ಅಲೆಯಿಂದ ಭಾರತ ತತ್ತರಿಸಿ ಹೋಗಿದ್ದು, ಭಾರತಕ್ಕೆ ತ್ವರಿತ ಮತ್ತು ಸಂಪೂರ್ಣ ವ್ಯಾಕ್ಸಿನೇಷನ್ ಅಗತ್ಯವಿದೆ. ಮೋದಿ ಸರ್ಕಾರದ ನಿಷ್ಕ್ರಿಯತೆಯಿಂದ ಉಂಟಾಗುವ ಲಸಿಕೆ ಕೊರತೆಯನ್ನು ಮುಚ್ಚಿಹಾಕಲು  ಬಿಜೆಪಿಯು ಜನತೆಗೆ ಸುಳ್ಳುಗಳ ಸರಮಾಲೆ ಪೋಣಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ  ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆಯ ಎರಡು ಪ್ರಮಾಣಗಳ ನಡುವಿನ ಅಂತರವನ್ನು ಸರ್ಕಾರವು ವೈಜ್ಞಾನಿಕ ಗುಂಪಿನ ಒಪ್ಪಂದವಿಲ್ಲದೆ ದ್ವಿಗುಣಗೊಳಿಸಿದೆ ಎಂಬ ವರದಿಯನ್ನು ರಾಹುಲ್  ಗಾಂಧಿ ಟ್ಯಾಗ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com