ರವಿಶಂಕರ್ ಪ್ರಸಾದ್, ತರೂರ್ ಟ್ವೀಟ್ ಖಾತೆಗಳ ಲಾಕ್: ಟ್ವಿಟ್ಟರ್‌ನಿಂದ ವಿವರಣೆ ಕೇಳಲು ಸಂಸದೀಯ ಸಮಿತಿ ನಿರ್ಧಾರ

ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಐಟಿ ಸಚಿವ ರವಿಶಂಕರ್ ಪ್ರಸಾದ್ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಅಧ್ಯಕ್ಷ ಶಶಿ ತರೂರ್ ಅವರ ಖಾತೆಗೆ ಟ್ವಿಟ್ಟರ್ ಒಂದು ಗಂಟೆ ಕಾಲ ನಿರ್ಬಂಧಿಸಿದ ನಂತರ, ಸ್ಥಾಯಿ ಸಮಿತಿಯು ಸಾಮಾಜಿಕ ಮಾಧ್ಯಮದಿಂದ ವಿವರಣೆಯನ್ನು ಪಡೆಯಲಿದೆ.
ಟ್ವಿಟ್ಟರ್
ಟ್ವಿಟ್ಟರ್

ನವದೆಹಲಿ:  ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರ ಖಾತೆಗೆ ಪ್ರವೇಶಿಸದಂತೆ ಟ್ವಿಟ್ಟರ್ ಒಂದು ಗಂಟೆ ಕಾಲ ನಿರ್ಬಂಧಿಸಿದ ನಂತರ, ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಅಧ್ಯಕ್ಷ ಶಶಿ ತರೂರ್ ಅವರು ತಾನೂ ಇದೇ ಬಗೆಯ ಸಮಸ್ಯೆ ಎದುರಿಸಿದ್ದಾಗಿ ಹೇಳಿದ್ದು ಸ್ಥಾಯಿ ಸಮಿತಿಯು ಸಾಮಾಜಿಕ ಮಾಧ್ಯಮದಿಂದ ವಿವರಣೆಯನ್ನು ಪಡೆಯಲಿದೆ ಎಂದು ಹೇಳಿದರು. ಭಾರತದಲ್ಲಿ ಕಾರ್ಯನಿರ್ವಹಿಸುವಾಗ ಅವರ ಖಾತೆಗಳ ತಾತ್ಕಾಲಿಕ ಲಾಕ್ ಮತ್ತು ಅದು ಅನುಸರಿಸುವ ನಿಯಮಗಳ ಬಗ್ಗೆ ದೃಢೀಕರಣ ಅಗತ್ಯವಾಗಿದೆ.

ಟ್ವಿಟ್ಟರ್ ಸಮಸ್ಯೆ ಎದುರಿಸುತ್ತಿರುವ ಕೇಂದ್ರ ಸಚಿವ  ಪ್ರಸಾದ್, ಟಿವಿ ಚರ್ಚೆಗಳ ತುಣುಕುಗಳನ್ನು ಪೋಸ್ಟ್ ಮಾಡುವ ಮೂಲಕ ಟ್ವಿಟ್ಟರ್ ಕಾಪಿರೈಟ್ ಕಾನೂನು ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದು ಅವರ ಖಾತೆಯನ್ನು  ಒಂದು ಗಂಟೆ ಕಾಲ ನಿರ್ಬಂಧಿಸಿ, ನಂತರ ಅನ್ ಲಾಕ್ ಮಾಡಿತ್ತು  ಈ ಬಗ್ಗೆ ಸಚಿವರು ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದರು.

ಪ್ರಸಾದ್ ಅವರ ಟ್ವೀಟ್ ಅನ್ನು ಟ್ಯಾಗ್ ಮಾಡಿದ ತರೂರ್, "ರವಿ ಜೀ ನನಗೂ ಅದೇ ರೀತಿ ಆಗಿದೆ.. ಸ್ಪಷ್ಟವಾಗಿ ಡಿಎಂಸಿಎ ಹೈಪರ್ಆಕ್ಟಿವ್ ಆಗುತ್ತಿದೆ" ಎಂದು ಹೇಳಿದರು. ಅವರ ಟ್ವೀಟ್‌ಗಳಲ್ಲಿ ಒಂದನ್ನು ಟ್ವಿಟ್ಟರ್ ಅಳಿಸಿದೆ ಏಕೆಂದರೆ ಅದರ ವೀಡಿಯೊದಲ್ಲಿ ಹಕ್ಕುಸ್ವಾಮ್ಯವುಳ್ಳ  ಬೋನಿ ಎಂ ಹಾಡು "ರಾಸ್‌ಪುಟಿನ್" ಸೇರಿದೆ. ಒಂದು ಪ್ರಕ್ರಿಯೆಯ ನಂತರ, ಖಾತೆಯನ್ನು ಅನ್ ಲಾಕ್  ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

ವಿದೇಶಿ ಸಂಗೀತದ ಕಿರು ವಿಡಿಯೋ ತುಣುಕುಗಳನ್ನು  ಬಳಸಿ ಭಾರತೀಯರು ಸೃಜನಾತ್ಮಕವಾಗಿ ವೀಡಿಯೊಗಳನ್ನು ತಯಾರಿಸುತ್ತಾರೆ ಮತ್ತು ಹೆಚ್ಚಿನ ಜನರು "ನ್ಯಾಯಯುತ ಬಳಕೆ" ಎಂದು ಇದನ್ನು  ಪರಿಗಣಿಸುತ್ತಾರೆ ಎಂದು ತರೂರ್ ಟ್ವೀಟ್‌ಗಳ ಸರಣಿಯಲ್ಲಿ ವಾದಿಸಿದರು.

ಕ್ಲಿಪ್ ಅವರ ಹಾಡಿನ ಜನಪ್ರಿಯತೆಯನ್ನು ಹೆಚ್ಚಿಸಲು ಅವಕಾಶ ನೀಡುವ ಬದಲು, ಕೃತಿಸ್ವಾಮ್ಯ ಹೊಂದಿರುವವರು ನೋಟಿಸ್ ನೀಡಿದ್ದಾರೆ ಎಂದ ಸಂಸದ  ಅವರು ಅದನ್ನು ರಿಟ್ವೀಟ್ ಮಾಡಿದ್ದರೂ, ಅವರು ತಮ್ಮ ಸ್ಪರ್ಧಿ ಅಲ್ಲ ಎಂದರು. 

ಈ ಸಂದರ್ಭದಲ್ಲಿ ದೂರುದಾರನು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫೋನೋಗ್ರಾಫಿಕ್ ಇಂಡಸ್ಟ್ರಿಯಾಗಿದ್ದು, ಇದು ಸೋನಿ ಮ್ಯೂಸಿಕ್‌ನ "ರಾಸ್‌ಪುಟಿನ್"ಹಕ್ಕುಗಳನ್ನು  ರಕ್ಷಿಸುತ್ತಿದೆ ಎಂದು ಅವರು ಹೇಳಿದರು. ವಿಪರ್ಯಾಸವೆಂದರೆ, ಭಾರತದಲ್ಲಿ ಅವರ ಕೊನೆಯ ಸೆಷನ್ ನಲ್ಲಿ  ತಾನು  ಮುಖ್ಯ ಭಾಷಣಕಾರರಾಗಿದ್ದದ್ದಾಗಿ ತರೂರ್ ಹೇಳಿದ್ದಾರೆ. "ಹಾಗಾಗಿ ನಾನು ಈ ಕ್ರಿಯೆಗೆ ಟ್ವಿಟ್ಟರ್ ಅನ್ನು ದೂಷಿಸುವುದಿಲ್ಲ ಅಥವಾ ನನ್ನ ಖಾತೆಯನ್ನು ಲಾಕ್ ಮಾಡಿರುವುದು ಉತ್ತಮ ಬೆಳವಣಿಗೆ ಅಲ್ಲದಿದ್ದರೂ ಪ್ರತಿಕ್ರಯಿಸುವ ಉದ್ದೇಶಗಳನ್ನು ನಾನು ಹೊಂದಿಲ್ಲ. ಸ್ಪಷ್ಟವಾಗಿ ಅವರಿಗೆ ಡಿಎಂಸಿಎ  ಹೈಪರ್ಆಕ್ಟಿವ್ ಸೂಚನೆಯನ್ನು ಗೌರವಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ, ಆದರೆ ಇದೊಂದು ಅವಿವೇಕಿ ಮತ್ತು ಅರ್ಥಹೀನ ವಿನಂತಿಯಾಗಿದೆ, "ಅವರು ಮತ್ತೊಂದು ಟ್ವೀಟ್ ನಲ್ಲಿ  ಹೇಳಿದರು.

ವಿದೇಶಿ ನಿಯಮಗಳಿಗೆ ಅನುಗುಣವಾಗಿ ಭಾರತೀಯ ನಿಯಮಗಳ ಉಲ್ಲಂಘನೆಯನ್ನು ಸಚಿವರು ಸೂಚಿಸಿದ್ದಾರೆ ಎಂದು ತರೂರ್ ಹೇಳಿದರು. "ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ರವಿಶಂಕರ್ ಪ್ರಸಾದ್  ಮತ್ತು ನನ್ನ ಖಾತೆಗಳನ್ನು ಲಾಕ್ ಮಾಡಲು  ಭಾರತದಲ್ಲಿ ಕಾರ್ಯನಿರ್ವಹಿಸುವಾಗ ಅವರು ಅನುಸರಿಸುವ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಲು ನಾವು ಟ್ವಿಟ್ಟರ್ ಇಂಡಿಯಾದಿಂದ ವಿವರಣೆಯನ್ನು ಕೋರುತ್ತೇವೆ" ತರೂರ್ ಹೇಳಿದರು.

ಈ ವಿಷಯವನ್ನು ಪರಿಶೀಲಿಸಿದ ರಾಜ್ಯಸಭಾ ಸಂಸದ ಮತ್ತು ಶಿವಸೇನೆ ನಾಯಕಿ  ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಫೇಸ್‌ಬುಕ್ ಪುಟಕ್ಕೆ ಮತ್ತು ದೂರದರ್ಶನ ಚರ್ಚೆಗಳಿಗೆ ಸಂಬಂಧಿಸಿದಂತೆ ಇದು ಸಂಭವಿಸಿದೆ ಎಂದು ಹೇಳಿದರು. "ನಾನು ಈ ಹಕ್ಕುಸ್ವಾಮ್ಯ ವಿಷಯವನ್ನು ಇಲಾಖೆಗೆ ಸಂಬಂಧಿಸಿದ ಸಮಿತಿ ಸಭೆಯಲ್ಲಿ ಕೂಡ ಎತ್ತಿದ್ದೇನೆ. ದುರದೃಷ್ಟವಶಾತ್, ಅದು ಸರ್ಕಾರಕ್ಕೆ ಸಂಭವಿಸಿದಾಗ ಮಾತ್ರ ಮಾತನಾಡಲಾಗುತ್ತದೆ. ಇದರಲ್ಲಿ ಯಾವುದೇ ಪಿತೂರಿ ಇಲ್ಲ ಇದು ಗಮನಹರಿಸದ ಸಂಗತಿಯಾಗಿದೆ ಮತ್ತು ಕಡಿನೆ ಜನಕ್ಕೆ ಇದರ ಅರ್ಥ ಆಗುತ್ತಿದೆ." ಎಂದು ಚತುರ್ವೇದಿ ಪ್ರಸಾದ್ ಅವರ ಟ್ವೀಟ್ ಅನ್ನು ಟ್ಯಾಗ್ ಮಾಡಿ ಹೇಳಿದ್ದಾರೆ.

"ಇಂದು ಅದು ಐಟಿ ಸಚಿವರಿಗೆ ಸಂಭವಿಸಿದಾಗ ಅವರು ವೇದಿಕೆಯನ್ನು ದೂಷಿಸುತ್ತಾರೆ! ವಿಷಯವು ನೀವಲ್ಲನಿಮ್ಮ ಸ್ಥಾನ ಅಥವಾ ವೇದಿಕೆಯಲ್ಲ, ಇದು ಸ್ಪಷ್ಟತೆಯ ಕೊರತೆಯಾಗಿದೆ " ಎಂದು ಚತುರ್ವೇದಿ ಹೇಳಿದರು.

ಯುಎಸ್ ಮೂಲದ ಡಿಜಿಟಲ್ ದೈತ್ಯ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಬಗ್ಗೆ ಭಾರತ ಸರ್ಕಾರದೊಂದಿಗೆ ವಿವಾದದಲ್ಲಿ ತೊಡಗಿರುವ  ಸಮಯದಲ್ಲಿ ಐಟಿ ಸಚಿವರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com