
ಅಮಿತ್ ಶಾ
ತಮಿಳುನಾಡು: ತಮಿಳು ಭಾಷೆ ಮಾತನಾಡಲು ಬಾರದಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡಿನ ಜನರ ಕ್ಷಮೆ ಕೋರಿದ್ದಾರೆ. ವಿಲ್ಲುಪುರಂನಲ್ಲಿ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಮಾತನಾಡಿದ ಅವರು, ಭಾರತದ ಅತ್ಯಂತ ಹಳೆಯ ಮತ್ತು ಸಿಹಿಯಾದ ಭಾಷೆ ಮಾತನಾಡಲು ಬಾರದಿರುವುದಕ್ಕೆ ತುಂಬಾ ದು:ಖವಾಗುತ್ತಿದೆ ಎಂದರು.
ಈ ಹಿಂದೆ ತಮಿಳುನಾಡಿನ ರೈಲ್ವೆ ನಿಲ್ದಾಣಗಳಲ್ಲಿ ಎಲ್ಲಾ ಪ್ರಕಟಣೆಗಳನ್ನು ಇಂಗ್ಲೀಷ್ ನಲ್ಲಿ ಮಾಡಲಾಗುತಿತ್ತು. ಇದೀಗ ತಮಿಳು ಭಾಷೆಯಲ್ಲೂ ಪ್ರಕಟಣೆ ಮಾಡಲಾಗುತ್ತಿದೆ. ಈ ಬದಲಾವಣೆ ಮಾಡಿದವರು ಪ್ರಧಾನಿ ನರೇಂದ್ರ ಮೋದಿ ಎಂದರು.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಕೂಡಾ ತಮಿಳು ಭಾಷೆ ಕಲಿಯಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.