ದೇಶ
130 ಕೋಟಿ ಜನ ಹೊತ್ತ ಹಡಗು ಮುಳುಗುತ್ತಿದೆ: ಆರೋಗ್ಯ ಸಚಿವರ ಹೇಳಿಕೆ ವಿರುದ್ಧ ಚಿದು ಲೇವಡಿ
ದೇಶದ 130 ಕೋಟಿ ಜನರನ್ನು ಹೊತ್ತ ಹಡಗು ಮುಳುಗುತ್ತಿದೆ ಎಂದು ಕೇಂದ್ರದ ವಿರುದ್ಧ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕಿಡಿಕಾರಿದ್ದಾರೆ.
ನವದೆಹಲಿ: ದೇಶದ 130 ಕೋಟಿ ಜನರನ್ನು ಹೊತ್ತ ಹಡಗು ಮುಳುಗುತ್ತಿದೆ ಎಂದು ಕೇಂದ್ರದ ವಿರುದ್ಧ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕಿಡಿಕಾರಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಚಿದಂಬರಂ, ಪ್ರಸ್ತುತ ಆರೋಗ್ಯ ಸಚಿವರ ಟ್ವೀಟ್ ಅಳಿಸಲಾಗಿದೆ.
' ಮೇ ದಿನ! ಮೇ ದಿನ! 130 ಕೋಟಿ ಜನರನ್ನು ಹೊತ್ತ ಹಡಗು 2021ರಲ್ಲಿ ಮುಳುಗುತ್ತಿದೆ. ನಮ್ಮನ್ನು ರಕ್ಷಿಸಿ, ಕನಿಷ್ಠ ಪಕ್ಷ ನನ್ನನ್ನಾದರೂ ಉಳಿಸಿ' ಎಂದು ಬರೆದುಕೊಂಡಿದ್ದಾರೆ.
ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 3,523 ಸಾವು ವರದಿಯಾಗಿದೆ. ಇದರ ಜೊತೆಗೆ ದೇಶದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಾಗಿರುವ ಹಿನ್ನಲೆಯಲ್ಲಿ ಚಿದಂಬರಂ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.