ಕೋವಿಡ್-19 ಗ್ರಾಮಗಳಿಗೂ ಹರಡುತ್ತಿದೆ, ಪ್ರತಿಭಟನೆ ನಿಲ್ಲಿಸಿ: ರೈತರಿಗೆ ಹರ್ಯಾಣ ಸಿಎಂ 

ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಪತ್ರ ಬರೆದಿದ್ದು ಕೋವಿಡ್-19 ಹಿನ್ನೆಲೆ ತಕ್ಷಣವೇ ಪ್ರತಿಭಟನೆಯನ್ನು ನಿಲ್ಲಿಸಲು ಮನವಿ ಮಾಡಿದ್ದಾರೆ. 
ಮನೋಹರ್ ಲಾಲ್ ಖಟ್ಟರ್
ಮನೋಹರ್ ಲಾಲ್ ಖಟ್ಟರ್

ಚಂಡೀಗಢ: ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಪತ್ರ ಬರೆದಿದ್ದು ಕೋವಿಡ್-19 ಹಿನ್ನೆಲೆ ತಕ್ಷಣವೇ ಪ್ರತಿಭಟನೆಯನ್ನು ನಿಲ್ಲಿಸಲು ಮನವಿ ಮಾಡಿದ್ದಾರೆ. 

ರೈತರ ನಡೆ ಹಾಗೂ ಪ್ರತಿಭಟನೆಗಳಿಂದಾಗಿ ಗ್ರಾಮೀಣ ಭಾಗಗಳಿಗೂ ಕೋವಿಡ್-19 ಸೋಂಕು ಹರಡುತ್ತಿದೆ ಎಂದು ಪತ್ರದ ಮೂಲಕ ಖಟ್ಟರ್ ಎಚ್ಚರಿಸಿದ್ದಾರೆ. 

ಕೋವಿಡ್-19 ಪರಿಸ್ಥಿತಿ ತಹಬದಿಗೆ ಬಂದ ನಂತರ ಬೇಕಾದಲ್ಲಿ ನೀವು ಮತ್ತೆ ಪ್ರತಿಭಟನೆಯನ್ನು ಪುನಃ ಪ್ರಾರಂಭಿಸಿ, ಆದರೆ ಈಗ ತಕ್ಷಣವೇ ಪ್ರತಿಭಟನೆ ನಿಲ್ಲಿಸಿ ಎಂದು ಖಟ್ಟರ್ ಮನವಿ ಮಾಡಿದ್ದಾರೆ. ಕನಿಷ್ಟ ಒಂದು ತಿಂಗಳ ಕಾಲವಾದರೂ ರೈತರು ತಮ್ಮ ಪ್ರತಿಭಟನೆಗಳನ್ನು ನಿಲ್ಲಿಸಬೇಕಿದೆ ಎಂದು ಖಟ್ಟರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com