ಹೊಸ ಗೌಪ್ಯತೆ ನೀತಿ ಹಿಂಪಡೆಯಲು ಭಾರತ ಮತ್ತೊಮ್ಮೆ ತಾಕೀತು, ಯಾವುದೇ ಖಾತೆ ಡಿಲೀಟ್ ಮಾಡಿಲ್ಲ ಎಂದ ವಾಟ್ಸಾಪ್‌

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಮೇ 18 ರಂದು ನೀಡಿದ ಹೇಳಿಕೆಯಲ್ಲಿ ವಾಟ್ಸಾಪ್ ತನ್ನವಿವಾದಾತ್ಮಕ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಮತ್ತೆ ಕೇಳಿದೆ. ಅಲ್ಲದೆ ಪ್ರತಿಕ್ರಿಯಿಸಲು ಏಳು ದಿನಗಳ ಕಾಲಾವಕಾಶ ಕೊಟ್ಟಿದೆ. 
ವಾಟ್ಸಾಪ್
ವಾಟ್ಸಾಪ್

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಮೇ 18 ರಂದು ನೀಡಿದ ಹೇಳಿಕೆಯಲ್ಲಿ ವಾಟ್ಸಾಪ್ ತನ್ನವಿವಾದಾತ್ಮಕ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಮತ್ತೆ ಕೇಳಿದೆ. ಅಲ್ಲದೆ ಪ್ರತಿಕ್ರಿಯಿಸಲು ಏಳು ದಿನಗಳ ಕಾಲಾವಕಾಶ ಕೊಟ್ಟಿದೆ. 

ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ಟ್ಸ್‌ಆ್ಯಪ್‌ಗೆ ಬರೆದಿರುವ ಪತ್ರದಲ್ಲಿ, ಟೆಕ್ ಸಂಸ್ಥೆಯಿಂದ ಸರ್ಕಾರಕ್ಕೆ ತೃಪ್ತಿದಾಯಕ ಪ್ರತಿಕ್ರಿಯೆ ಬರದಿದ್ದರೆ, ಕಾನೂನಿಗೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಏತನ್ಮಧ್ಯೆ, ಹೆಚ್ಚಿನ ಬಳಕೆದಾರರು ಈಗಾಗಲೇ ಹೊಸ ಸೇವಾ ನಿಯಮಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಮೇ 15 ರ ಗಡುವು ಮುಗಿದರೂ ಬಳಕೆದಾರರ ಯಾವುದೇ ಖಾತೆಗಳನ್ನು ಅಥವಾ ಸೀಮಿತ ಫಂಕ್ಷನ್ ಗಳನ್ನು ತೆಗೆದಿಲ್ಲ ಎಂದು ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಸಂಸ್ಥೆ ತಿಳಿಸಿದೆ.

ಭಾರತವು ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯನ್ನು ತಾರತಮ್ಯ ನೀತಿ ಎಂದು ಕರೆಯುವ ಮೂಲಕ ತಳ್ಳಿಹಾಕಿದೆ. ಇದು ದೇಶದ ಜನರ ಗೌಪ್ಯತೆ ನೀತಿ, ಡೇಟಾ ಸುರಕ್ಷತೆ ಮತ್ತು ಬಳಕೆದಾರರ ಆಯ್ಕೆಗಳನ್ನು ಹಾನಿಗೊಳಿಸುತ್ತದೆ ಮತ್ತು ನಾಗರಿಕರ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ ಎಂದು ಸರ್ಕಾರ ಹೇಳಿದೆ. “ನಿಮಗೆ ನಿಸ್ಸಂದೇಹವಾಗಿ ತಿಳಿದಿರುವಂತೆ, ಅನೇಕ ಭಾರತೀಯ ನಾಗರಿಕರು ದೈನಂದಿನ ಜೀವನದಲ್ಲಿ ಸಂವಹನ ನಡೆಸಲು ವಾಟ್ಸಾಪ್ ಅನ್ನು ಅವಲಂಬಿಸಿದ್ದಾರೆ. ಆದರೆ ಕಾನೂನುಗಳಿಗೆ ವಿರುದ್ಧ ನಿಯಮಗಳು ಮತ್ತು ಷರತ್ತುಗಳನ್ನು ಭಾರತೀಯ ಬಳಕೆದಾರರ ಮೇಲೆ ಹೇರಲು ವಾಟ್ಸ್‌ಆ್ಯಪ್ ಬಯಸಿದೆ. ಅದರಲ್ಲೂ ವಿಶೇಷವಾಗಿ ಯುರೋಪಿನಲ್ಲಿರುವ ಬಳಕೆದಾರ  ಹಾಗೂಭಾರತೀಯ ಬಳಕೆದಾರರ ವಿರುದ್ಧ ತಾರತಮ್ಯವನ್ನು ತೋರಿಸುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ವಾಟ್ಸಾಪ್, ಹೇಳಿಕೆಯೊಂದರಲ್ಲಿ, ಇದು ಸರ್ಕಾರದೊಂದಿಗೆ ಸಹಕರಿಸಲು ಸಿದ್ದವಾಗಿದೆ. ಅಲ್ಲದೆ ನೀತಿ ನವೀಕರಣವು ಯಾವ ವೈಯಕ್ತಿಕ ಸಂದೇಶಗಳ ಗೌಪ್ಯತೆಗೆ ಪರಿಣಾಮ ಬೀರುವುದಿಲ್ಲ. ಎಂದಿದೆ.ಇದಕ್ಕೂ ಮೊದಲು ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರವು ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯು ದೇಶದ ಮಾಹಿತಿ ತಂತ್ರಜ್ಞಾನ ಕಾಯ್ದೆ 2020 ಅನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com