ತಮಿಳುನಾಡಿನ ಟ್ಯಾಕ್ಸಿ ಆಂಬ್ಯುಲೆನ್ಸ್, ರಾಜಸ್ಥಾನದ ಮೊಬೈಲ್ ಒಪಿಡಿ, ಕೇರಳದ ಆಕ್ಸಿಜನ್ ದಾದಿಯರು ಕೋವಿಡ್ ವಿರುದ್ಧದ ಸಮರ್ಪಿತ ಪ್ರಯತ್ನ: ಕೇಂದ್ರ ಶ್ಲಾಘನೆ

ತಮಿಳುನಾಡಿನ ಟ್ಯಾಕ್ಸಿ ಆಂಬ್ಯುಲೆನ್ಸ್, ರಾಜಸ್ಥಾನದ ಮೊಬೈಲ್ ಒಪಿಡಿ, ಮತ್ತು ಕೇರಳದ ಆಕ್ಸಿಜನ್ ದಾದಿಯರು ಸೇರಿದಂತೆ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಬಳಸಿದ ಅತ್ಯುತ್ತಮ 15 ಉಪಕ್ರಮಗಳ ಪಟ್ಟಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ರಾಜ್ಯಗಳಿಗೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತಮಿಳುನಾಡಿನ ಟ್ಯಾಕ್ಸಿ ಆಂಬ್ಯುಲೆನ್ಸ್, ರಾಜಸ್ಥಾನದ ಮೊಬೈಲ್ ಒಪಿಡಿ, ಮತ್ತು ಕೇರಳದ ಆಕ್ಸಿಜನ್ ದಾದಿಯರು ಸೇರಿದಂತೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಬಳಸಿದ ಅತ್ಯುತ್ತಮ 15 ಉಪಕ್ರಮಗಳನ್ನು ಒಳಗೊಂಡ ಪಟ್ಟಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರದ ಮೂಲಕ ತಿಳಿಸಿದೆ.

ರಾಜ್ಯಗಳಿಗೆ ಬರೆದ ಪತ್ರದಲ್ಲಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಮೇ 18 ಮತ್ತು ಮೇ 20 ರಂದು ಕೋವಿಡ್ ನಿರ್ವಹಣೆಗೆ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಜಿಲ್ಲಾಧಿಕಾರಿಗಳು ಮತ್ತು ಮುನ್ಸಿಪಲ್ ಕಮಿಷನರ್‌ಗಳೊಂದಿಗೆ ನಡೆಸಿದ ಸಂವಾದವನ್ನು ಉಲ್ಲೇಖಿಸಿದ್ದಾರೆ. "ಸಮನ್ವಯ ಮತ್ತು ಸಾಂಕ್ರಾಮಿಕ ಮತ್ತು ಸಂಬಂಧಿತ ಸವಾಲುಗಳನ್ನು ನಿರ್ವಹಿಸಲು ಸ್ಥಳೀಯ ಆವಿಷ್ಕಾರಗಳ ಮೂಲಕ ರಾಜ್ಯಗಳು ಮತ್ತು ಜಿಲ್ಲೆಗಳು ಮಾಡಿದ ಸಮರ್ಪಿತ ಪ್ರಯತ್ನಗಳು ಶ್ಲಾಘನೀಯ" ಎಂದು ಹೇಳಿದ್ದಾರೆ.

ಹಳ್ಳಿಗಳಲ್ಲಿ ಕೊರೋನಾಯೇತರ ರೋಗಿಗಳಿಗೆ ಅಗತ್ಯ ವೈದ್ಯಕೀಯ ಸೇವೆ ಒದಗಿಸಲು ಬ್ಲಾಕ್ ಮಟ್ಟದಲ್ಲಿ ಮೊಬೈಲ್ ಒಪಿಡಿ ಮತ್ತು ರಾಜಸ್ಥಾನದ ಬಿಕಾನೆರ್ ನಲ್ಲಿ ಆಮ್ಲಜನಕದ ವ್ಯರ್ಥವನ್ನು ಪರೀಕ್ಷಿಸಲು ಪ್ರತಿ ಆಸ್ಪತ್ರೆಯಲ್ಲಿ "ಆಕ್ಸಿಜನ್ ಮಿತ್ರ" ಒದಗಿಸಿರುವುದು; ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ ಎಟಿ ಮತ್ತು ಆರ್ಟಿ-ಪಿಸಿಆರ್ ಎರಡನ್ನೂ ಬಳಸಿಕೊಂಡು ಮನೆ-ಮನೆ-ಮನೆ ಪರೀಕ್ಷೆ, ಇದು ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಪಾಸಿಟಿವ್ ಪ್ರಮಾಣವನ್ನು ಶೇ. 38 ರಿಂದ 2.8 ಕ್ಕೆ ಇಳಿಸಿದೆ. ಈ ರೀತಿ ರಾಜ್ಯಗಳ ಹಲವು ಪ್ರಯತ್ನಗಳನ್ನು ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಪಟ್ಟಿ ಮಾಡಿ ಶ್ಲಾಘಿಸಿದ್ದಾರೆ.

ಕೇರಳದ ಆಸ್ಪತ್ರೆಗಳಲ್ಲಿ ಆಮ್ಲಜನಕದ ತರ್ಕಬದ್ಧ ಬಳಕೆಯನ್ನು ಖಚಿತಪಡಿಸಿಕೊಳ್ಳಲು "ಆಕ್ಸಿಜನ್ ದಾದಿಯರ ಬಳಕೆ" ಯನ್ನು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ನಿವಾಸಿಗಳ ಕಲ್ಯಾಣ ಸಂಘ(ಆರ್‌ಡಬ್ಲ್ಯುಎ)ದ ಸಕ್ರಿಯ ಸಹಕಾರದೊಂದಿಗೆ ಪ್ರತ್ಯೇಕ ಕೇಂದ್ರಗಳು ಮತ್ತು ಕೋವಿಡ್ ಕೇರ್ ಕೇಂದ್ರಗಳ ಸ್ಥಾಪನೆ ಮತ್ತು ಕಾರ್ಯಾಚರಣೆ ಸೇರಿದಂತೆ ಹಲವು ಉತ್ತಮ ಕಾರ್ಯಗಳನ್ನು ಆರೋಗ್ಯ ಕಾರ್ಯದರ್ಶಿ ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com