ಮೇ 26ರ ರೈತರ ಪ್ರತಿಭಟನಾ ಕರೆಗೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ 12 ವಿಪಕ್ಷಗಳ ಬೆಂಬಲ!

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ಕಳೆದ ಆರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವುದನ್ನು ಕೇಂದ್ರಿಕರಿಸಿ ಮೇ 26ರಂದು ದೇಶಾದ್ಯಂತ ಪ್ರತಿಭಟನೆಗೆ ಸಮುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದು ಇದಕ್ಕೆ 12 ಪ್ರಮುಖ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ.
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ಕಳೆದ ಆರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವುದನ್ನು ಕೇಂದ್ರಿಕರಿಸಿ ಮೇ 26ರಂದು ದೇಶಾದ್ಯಂತ ಪ್ರತಿಭಟನೆಗೆ ಸಮುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದು ಇದಕ್ಕೆ 12 ಪ್ರಮುಖ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ.

ಕಾಂಗ್ರೆಸ್ ವರಿಷ್ಠೆ ಸೇರಿ ಸೋನಿಯಾ ಗಾಂಧಿ, ಎಚ್‌ಡಿ ದೇವೇಗೌಡ(ಜೆಡಿ-ಎಸ್), ಶರದ್ ಪವಾರ್(ಎನ್‌ಸಿಪಿ), ಮಮತಾ ಬ್ಯಾನರ್ಜಿ(ಟಿಎಂಸಿ), ಉದ್ಧವ್ ಠಾಕ್ರೆ(ಎಸ್‌ಎಸ್), ಎಂಕೆ ಸ್ಟಾಲಿನ್(ಡಿಎಂಕೆ), ಹೇಮಂತ್ ಸೊರೆನ್(ಜೆಎಂಎಂ) ), ಫಾರೂಕ್ ಅಬ್ದುಲ್ಲಾ(ಜೆಕೆಪಿಎ), ಅಖಿಲೇಶ್ ಯಾದವ್(ಎಸ್‌ಪಿ), ತೇಜಸ್ವಿ ಯಾದವ್(ಆರ್‌ಜೆಡಿ), ಡಿ ರಾಜ(ಸಿಪಿಐ) ಮತ್ತು ಸೀತಾರಾಮ್ ಯೆಚೂರಿ(ಸಿಪಿಐ-ಎಂ) ಈ ಬಗ್ಗೆ 12 ಪಕ್ಷಗಳ ಅಧಿನಾಯಕರು ಜಂಟಿ ಹೇಳಿಕೆಗೆ ಬಿಡುಗಡೆ ಮಾಡಿದ್ದಾರೆ. 

"ಮೇ 12ರಂದು ನಾವು ಪ್ರಧಾನಿ ಮೋದಿಯವರಿಗೆ ಜಂಟಿಯಾಗಿ ಈ ಕೆಳಗಿನವುಗಳನ್ನು ಬರೆದಿದ್ದೇವೆ: ನಮ್ಮ ಅನ್ನದಾತರು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವುದನ್ನು ರಕ್ಷಿಸಲು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ ಇದರಿಂದ ಭಾರತೀಯರಿಗೆ ಆಹಾರಕ್ಕಾಗಿ ಬೆಳೆಗಳನ್ನು ಬೆಳೆಯಲು ಮುಂದುವರಿಸಬಹುದು. "ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದಂತೆ ಕೃಷಿ ಕಾನೂನುಗಳನ್ನು ತಕ್ಷಣ ರದ್ದುಪಡಿಸಬೇಕು. ಸಿ2+50 ರ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್ಪಿ) ಕಾನೂನುಬದ್ಧ ಅರ್ಹತೆ ನೀಡುವಂತೆ ಕೋರಲಾಗಿರುವುದಾಗಿ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರವು ನಿಸ್ಸಂಶಯವಾಗಿರುವುದನ್ನು ನಿಲ್ಲಿಸಬೇಕು ಮತ್ತು ತಕ್ಷಣವೇ ಈ ಮಾರ್ಗಗಳಲ್ಲಿ ಎಸ್‌ಕೆಎಂ ಜೊತೆ ಮಾತುಕತೆ ಪುನರಾರಂಭಿಸಬೇಕು ಎಂದು ವಿಪಕ್ಷಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com