ಆಸ್ತಿ ವಿವಾದ: ಅಯೋಧ್ಯೆಯಲ್ಲಿ 3 ಅಪ್ರಾಪ್ತ ಮಕ್ಕಳು ಸೇರಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ

ಜಿಲ್ಲೆಯ ಇನಾಯತ್‌ನಗರ ಪ್ರದೇಶದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರನ್ನು ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಉತ್ತರಪ್ರದೇಶ ಪೊಲೀಸರು
ಉತ್ತರಪ್ರದೇಶ ಪೊಲೀಸರು

ಅಯೋಧ್ಯೆ: ಜಿಲ್ಲೆಯ ಇನಾಯತ್‌ನಗರ ಪ್ರದೇಶದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರನ್ನು ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಹತ್ಯೆ ಆರೋಪಿ ಪವನ್ ಎಂಬಾತ ತನ್ನ ಚಿಕ್ಕಪ್ಪನ ಗಂಟಲು ಸೀಳಿ ಕೊಲೆ ಮಾಡಿದ್ದಾನೆ ಎಂದು ಎಸ್‌ಎಸ್‌ಪಿ ಶೈಲೇಶ್ ಪಾಂಡೆ ಭಾನುವಾರ ಹೇಳಿದ್ದಾರೆ.  

ಇನಾಯತ್‌ನಗರ ಪೊಲೀಸ್ ಠಾಣೆ ಪ್ರದೇಶದ ಖಾನ್ಪುರ್ ಮಜ್ರೆ ಗ್ರಾಮದಲ್ಲಿ ಆರೋಪಿ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಮೂವರು ಅಪ್ರಾಪ್ತ ಸಹೋದರರನ್ನೇ ಹತ್ಯೆ ಮಾಡಿದ್ದಾನೆ. 

ಮೃತರನ್ನು ರಾಕೇಶ್ ಕಹಾರ್, ಅವರ ಪತ್ನಿ ಜ್ಯೋತಿ ಮತ್ತು ಅವರ ಮೂವರು ಗಂಡು ಮಕ್ಕಳು 4, 6 ಮತ್ತು 8 ವರ್ಷದ ವಯಸ್ಸಿನವರು ಎಂದು ಗುರುತಿಸಲಾಗಿದೆ.

ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಈ ಹತ್ಯೆಗಳು ನಡೆದಿವೆ ಎಂದು ಡಿಎಂ ಅನಿಜ್ ಕುಮಾರ್ ಅವರು ತಿಳಿಸಿದ್ದು, ಪರಾರಿಯಾಗಿರುವ ಪವನ್ ನನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com