ಸಂಸತ್ ಚಳಿಗಾಲದ ಅಧಿವೇಶನ: ನವೆಂಬರ್ 29ರಂದು ಸದನ ನಾಯಕರ ಸಭೆ ಕರೆದ ಸ್ಪೀಕರ್

ಸುಗಮ ಕಲಾಪಕ್ಕಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನವೆಂಬರ್ 29ರಂದು ಉಭಯ ಸದನಗಳ ನಾಯಕರ ಸಭೆ ಕರೆದಿದ್ದಾರೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಸುಗಮ ಕಲಾಪಕ್ಕಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನವೆಂಬರ್ 29ರಂದು ರಾಜಕೀಯ ಪಕ್ಷಗಳ ಸದನ ನಾಯಕರ ಸಭೆ ನಡೆಸಲಿದ್ದಾರೆ ಎಂದು ಶನಿವಾರ ಮೂಲಗಳು ತಿಳಿಸಿವೆ.

ಲೋಕಸಭಾ ವ್ಯವಹಾರಗಳ ಸಲಹಾ ಸಮತಿಯೊಂದಿಗೆ ಸ್ಪೀಕರ್ ಓಂ ಬಿರ್ಲಾ ಅವರು ಸದನ ನಾಯಕರ ಸಭೆ ನಡೆಸುವ ಸಾಧ್ಯತೆ  ಅವರು ಹೇಳಿದ್ದಾರೆ.

ನವೆಂಬರ್ 26 ರಂದು ಲೋಕಸಭೆಯ ಸೆಕ್ರೆಟರಿಯೇಟ್ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಬಹಿಷ್ಕರಿಸಿದ್ದವು. ಪ್ರತಿಪಕ್ಷಗಳು ಸಂವಿಧಾನ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಬಗ್ಗೆ ಅವರು ಬಿರ್ಲಾ ತೀವ್ರ "ನೋವು" ವ್ಯಕ್ತಪಡಿಸಿದ್ದರು.

ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಬಿರ್ಲಾ, ಸುಗಮ ಕಾಲಪಕ್ಕಾಗಿ ಒಮ್ಮತವನ್ನು ಮೂಡಿಸಲು ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದೊಂದಿಗೆ ಕುಳಿತು ಮಾತನಾಡುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com