ವಿಜಯವಾಡ: ತಂದೆಯ ಕಪಾಳಕ್ಕೆ ಹೊಡೆದ ಸ್ವಂತ ಅಣ್ಣನನ್ನು ಹತ್ಯೆಗೈದ ತಮ್ಮ; ಕ್ಷುಲ್ಲಕ ಜಗಳ ಸಾವಿನಲ್ಲಿ ಅಂತ್ಯ

ನಾಗರಾಜು ಕುಡಿದುಕೊಂಡು ಮನೆಗೆ ಬಂದು ಕ್ಷುಲ್ಲಕ ವಿಚಾರಕ್ಕೆ ಕ್ಯಾತೆ ತೆಗೆದಿದ್ದ. ಜಗಳ ತಾರಕಕ್ಕೇರಿ ಮಾತಿಗೆ ಮಾತು ಬೆಳೆದಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜಯವಾಡ: ಕೌಟುಂಬಿಕ ಕಲಹ ಓರ್ವ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ. ಮೃತ ವ್ಯಕ್ತಿಯ ಹೆಸರು ಚಿಟ್ಟಿಪೋತುಲ ನಾಗರಾಜು ಎಂದು ತಿಳಿದುಬಂದಿದೆ. ಆತ ತನ್ನ ತಮ್ಮನಿಂದಲೇ ಹತ್ಯೆಗೀಡಾಗಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ನಾಗರಾಜು ಕುಡಿದುಕೊಂಡು ಮನೆಗೆ ಬಂದು ಕ್ಷುಲ್ಲಕ ವಿಚಾರಕ್ಕೆ ಕ್ಯಾತೆ ತೆಗೆದಿದ್ದ. ನಿರುದ್ಯೋಗಿಯಾಗಿದ್ದ ನಾಗರಾಜು ತನ್ನ ಖರ್ಚಿಗೆ ತಂದೆಯಲ್ಲಿ ಹಣ ಕೇಳಿದ್ದ ಎನ್ನಲಾಗಿದೆ. ಜಗಳ ತಾರಕಕ್ಕೇರಿದಾಗ ಮಾತಿಗೆ ಮಾತು ಬೆಳೆದಾಗ ಕೋಪದಿಂದ ನಾಗರಾಜು ತಂದೆಯ ಕಪಾಳಕ್ಕೆ ಹೊಡೆದಿದ್ದ. 

ತಂದೆಯ ಕಪಾಳಕ್ಕೆ ನಾಗರಾಜು ಬಾರಿಸಿದ್ದನ್ನು ಕಂಡ ತಮ್ಮ ಸುರೇಶ್ ಅಣ್ಣನ ಮೇಲೆ ದಾಳಿ ನಡೆಸಿದ್ದ. ದಾಳಿಯಿಂದ ತೀವ್ರವಾಗಿ ಗಾಯಗೊಂದ ನಾಗರಾಜು ಮೃತಪಟ್ಟಿದ್ದಾನೆ. ಆರೋಪಿ, ಸಹೋದರ ಸುರೇಶ್ ತಲೆಮರೆಸಿಕೊಂಡಿದ್ದು ಆತನ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com