ರಾಜ್ಯಸಭೆಯ 12 ಸಂಸದರ ಅಮಾನತು: ಮುಂದಿನ ಹೋರಾಟ ಕುರಿತು ಚರ್ಚಿಸಲು ನಾಳೆ ಪ್ರತಿಪಕ್ಷಗಳ ಸಭೆ

ಅನುಚಿತ ವರ್ತನೆಯಿಂದಾಗಿ ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಮಾಡಲಾಗಿದ್ದು, ಮುಂದಿನ ಹೋರಾಟ ಕುರಿತು ಚರ್ಚಿಸಲು ನಾಳೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಪ್ರತಿಪಕ್ಷಗಳ ಸಭೆಯನ್ನು ಕರೆಯಲಾಗಿದೆ.
ಅಮಾನುತಗೊಂಡಿರುವ ರಾಜ್ಯಸಭೆಯ ಸಂಸದರು
ಅಮಾನುತಗೊಂಡಿರುವ ರಾಜ್ಯಸಭೆಯ ಸಂಸದರು

ನವದೆಹಲಿ: ಅನುಚಿತ ವರ್ತನೆಯಿಂದಾಗಿ ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಮಾಡಲಾಗಿದ್ದು, ಮುಂದಿನ ಹೋರಾಟ ಕುರಿತು ಚರ್ಚಿಸಲು ನಾಳೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಪ್ರತಿಪಕ್ಷಗಳ ಸಭೆಯನ್ನು ಕರೆಯಲಾಗಿದೆ.

 ಅಮಾನತ್ತಾಗಿರುವ  12 ಸಂಸದರ ಪೈಕಿ ಆರು ಮಂದಿ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಶಿವಸೇನಾ ಹಾಗೂ ಟಿಎಂಸಿಯ ಇಬ್ಬರು ಸಂಸದರು ಹಾಗೂ ಸಿಪಿಐ ಹಾಗೂ ಸಿಪಿಐನ ಒಬ್ಬರು ಸಂಸದರು ಅಮಾನತುಗೊಂಡಿದ್ದಾರೆ. 

ಜಿಲ್ಲಾ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೆ, ಅಲ್ಲಿಯೂ ಆರೋಪಿಯ ವಿಚಾರಣೆ ನಡೆಯುತ್ತದೆ, ಅವರಿಗೂ ವಕೀಲರನ್ನು ಒದಗಿಸಲಾಗುತ್ತದೆ, ಕೆಲವೊಮ್ಮೆ ಅವರ ವಾದವನ್ನು ತೆಗೆದುಕೊಳ್ಳಲು ಸರ್ಕಾರಿ ಅಧಿಕಾರಿಗಳನ್ನು ಕಳುಹಿಸಲಾಗುತ್ತದೆ.  ನಮ್ಮ ವಾದವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಶಿವಸೇನೆಯ ಸಂಸದೆ ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ. 

"ಈ ಅಮಾನತು ಅನ್ಯಾಯವಾಗಿದೆ ಮತ್ತು ಅನ್ಯಾಯವಾಗಿದೆ. ಇತರ ಪಕ್ಷಗಳ ಸದಸ್ಯರು ಗದ್ದಲವನ್ನು ಸೃಷ್ಟಿಸಿದರು ಆದರೆ ಸಭಾಪತಿ ನನ್ನನ್ನು ಅಮಾನತುಗೊಳಿಸಿದರು. ಪ್ರಧಾನಿ ಮೋದಿ ಅವರು ಬಹುಮತವನ್ನು ಹೊಂದಿರುವುದರಿಂದ ಅವರು ಬಯಸಿದಂತೆಯೇ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ಸದಸ್ಯೆ ಛಾಯಾ ವರ್ಮಾ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com