ಪರಮೇಶ್ವರನ್ ನಂಬೂತಿರಿ ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರಾಗಿ ನೇಮಕ

ಮಾವೆಲಿಕ್ಕರದ ಕಳಿಕ್ಕಲ್ ಮೇಡಂನ ಎನ್ ಪರಮೇಶ್ವರನ್ ನಂಬೂತಿರಿ ಅವರನ್ನು ಇಂದು ಬೆಳಗ್ಗೆ ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರಾಗಿ ನೇಮಕ ಮಾಡಲಾಗಿದೆ.
ಪರಮೇಶ್ವರನ್ ನಂಬೂತಿರಿ
ಪರಮೇಶ್ವರನ್ ನಂಬೂತಿರಿ

ತಿರುವನಂತಪುರಂ: ಮಾವೆಲಿಕ್ಕರದ ಕಳಿಕ್ಕಲ್ ಮೇಡಂನ ಎನ್ ಪರಮೇಶ್ವರನ್ ನಂಬೂತಿರಿ ಅವರನ್ನು ಇಂದು ಬೆಳಗ್ಗೆ ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರಾಗಿ ನೇಮಕ ಮಾಡಲಾಗಿದೆ.

ನವೆಂಬರ್ 16 ರಿಂದ ಆರಂಭವಾಗುವ ಒಂದು ವರ್ಷದ ಅವಧಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಅರ್ಚಕರ ಆಯ್ಕೆ ಭಾನುವಾರ ಬೆಳಗ್ಗೆ ದೇವಾಲಯದ ಸೋಪಾನಂನಲ್ಲಿ ಡ್ರಾ ಮೂಲಕ ನಡೆಯಿತು ಎಂದು ತಿರುವಾಂಕೂರು ದೇವಸ್ವಂ ಬೋರ್ಡ್(ಟಿಡಿಬಿ) ಹೇಳಿದೆ.

ಇನ್ನು ಮಾಲಿಕಪ್ಪುರಂ ದೇವಿ ದೇವಸ್ಥಾನ ಅರ್ಚಕರಾಗಿ ಶಂಭು ನಂಬೂತಿ ಅವರನ್ನು ಆಯ್ಕೆ ಮಾಡಲಾಗಿದೆ. 

ಕೋಳಿಕೋಡ್ ಮೂಲದ ಶಂಭು ನಂಬೂತಿರಿ ಈ ಹುದ್ದೆಗೆ ಇದು ಹತ್ತನೇ ಬಾರಿ ಅರ್ಜಿ ಸಲ್ಲಿಸಿದ್ದಾಗಿ ಹೇಳಿದ್ದಾರೆ. ತಿರುವಾಂಕೂರು ದೇವಸ್ವಂ ಮಂಡಳಿಯು ನಡೆಸಿದ ಸಂದರ್ಶನದ ನಂತರ ಶಾರ್ಟ್‌ಲಿಸ್ಟ್ ಮಾಡಲಾಗಿರುವ ಅರ್ಚಕರ ಸಮಿತಿಯಿಂದ ಚೀಟಿಗಳನ್ನು ತೆಗೆದುಕೊಳ್ಳುವ ಮೂಲಕ ಈ ಆಯ್ಕೆಯನ್ನು ಮಾಡಲಾಗಿದೆ.

ಕಳೆದ ಎರಡು ಬಾರಿ ನನ್ನನ್ನು ಆಯ್ಕೆ ಪ್ರಕ್ರಿಯೆಯ ಅಂತಿಮ ಪಟ್ಟಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಆದರೆ ಅಂತಿಮವಾಗಿ, ಈ ಅವಧಿಯಲ್ಲಿ, ನಾನು ಈ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ನನ್ನ ದೇವಸ್ಥಾನಕ್ಕೆ ಬರುವ ನೂರಾರು ಭಕ್ತರ ಸರ್ವಶಕ್ತ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com