ಪ್ರಿಯಾಂಕಾ ಗಾಂಧಿ ಬಾರಾಬಂಕಿಯಿಂದ 'ಪ್ರತಿಜ್ಞಾ ಯಾತ್ರೆ' ಆರಂಭಿಸಲಿದ್ದಾರೆ: ಕಾಂಗ್ರೆಸ್
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2022ರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷ ಅಳವಡಿಸಿಕೊಂಡ ವಿವಿಧ ನಿರ್ಣಯಗಳನ್ನು ಜನರಿಗೆ ತಲುಪಿಸಲು...
Published: 22nd October 2021 07:44 PM | Last Updated: 22nd October 2021 07:44 PM | A+A A-

ಪ್ರಿಯಾಂಕಾ ಗಾಂಧಿ
ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2022ರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷ ಅಳವಡಿಸಿಕೊಂಡ ವಿವಿಧ ನಿರ್ಣಯಗಳನ್ನು ಜನರಿಗೆ ತಲುಪಿಸಲು ಶನಿವಾರ ಬರಾಬಂಕಿಯಿಂದ 'ಪ್ರತಿಜ್ಞಾ ಯಾತ್ರೆ' ಆರಂಭಿಸಲಿದ್ದಾರೆ.
ಈ ಸಂದರ್ಭದಲ್ಲಿ, ಅವರು ಚುನಾವಣಾ ಪ್ರಣಾಳಿಕೆಯ ಹೊರತಾಗಿ ಉತ್ತರ ಪ್ರದೇಶ ಜನರಿಗಾಗಿ ತೆಗೆದುಕೊಂಡ ಏಳು ನಿರ್ಣಯಗಳನ್ನು ವಿವರಿಸಲಿದ್ದಾರೆ ಎಂದು ಮಾಜಿ ಸಂಸದ ಹಾಗೂ ಛತ್ತೀಸ್ಗಢದ ಕಾಂಗ್ರೆಸ್ ಉಸ್ತುವಾರಿ ಪಿ ಎಲ್ ಪುನಿಯಾ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನು ಓದಿ: ಪ್ರಿಯಾಂಕಾ ಗಾಂಧಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳಾ ಪೊಲೀಸರ ವಿರುದ್ಧ ಕ್ರಮ ಸಾಧ್ಯತೆ
ಬರಾಬಂಕಿಯಿಂದ ಬುಂದೇಲ್ಖಂಡ್, ಸಹರಾನ್ಪುರದಿಂದ ಮಥುರಾ ಮತ್ತು ವಾರಣಾಸಿಯಿಂದ ರಾಯ್ ಬರೇಲಿಯವರೆಗೆ ಮೂರು ಮಾರ್ಗಗಳಲ್ಲಿ ಅಕ್ಟೋಬರ್ 23 ರಿಂದ ನವೆಂಬರ್ 1 ರವರೆಗೆ 'ಪ್ರತಿಜ್ಞಾ ಯಾತ್ರೆ' ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಅವಧ್ ಪ್ರದೇಶವನ್ನು ಒಳಗೊಂಡ ವಾರಣಾಸಿಯಿಂದ ರಾಯ್ ಬರೇಲಿ ಮಾರ್ಗದ ಯಾತ್ರೆಯನ್ನು ಮಾಜಿ ಸಂಸದ ಪ್ರಮೋದ್ ತಿವಾರಿ ಮುನ್ನಡೆಸಿದರೆ, ಬಾರಾಬಂಕಿ-ಬುಂದೇಲ್ಖಂಡ್ ಮಾರ್ಗವನ್ನು ಪುನಿಯಾ ಮತ್ತು ಕೇಂದ್ರದ ಮಾಜಿ ಸಚಿವ ಪ್ರದೀಪ್ ಜೈನ್ ಆದಿತ್ಯ ನೇತೃತ್ವ ವಹಿಸಲಿದ್ದಾರೆ
ರಾಜ್ಯದ ಪಶ್ಚಿಮ ಭಾಗಗಳನ್ನು ಒಳಗೊಂಡ ಸಹರನ್ ಪುರ-ಮಥುರಾ ಮಾರ್ಗದ ಯಾತ್ರೆಯ ನೇತೃತ್ವದ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಪಕ್ಷದ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.