ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರಪ್ರದೇಶದಲ್ಲಿ ಪಕ್ಷದ ಉಸ್ತುವಾರಿ ಹೊತ್ತುಕೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಬಾರಾಬಂಕಿಯಲ್ಲಿ ಪ್ರತಿಜ್ಞಾ ಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷವು 7 ವಾಗ್ದಾನಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ.
ಬಾರಾಬಂಕಿಯಿಂದ ಶುರುವಾದ ಪ್ರತಿಜ್ಞಾ ಯಾತ್ರೆ ನವೆಂಬರ್1 ರಂದು ಬುಂದೇಲ್ ಖಂಡ್ ಪ್ರಾಂತ್ಯದಲ್ಲಿ ಕೊನೆಗೊಳ್ಳಲಿದೆ. ಯಾತ್ರೆಯು ಸಹಾರನ್ ಪುರ, ಮಥುರಾ, ವಾರಾಣಸಿ ಮತ್ತು ರಾಯ್ ಬರೇಲಿಯನ್ನು ಹಾದುಹೋಗಲಿದೆ.
ಉತ್ತರಪ್ರದೇಶದ ಜನರಿಗೆ ಕಾಂಗ್ರೆಸ್ ನೀಡಿರುವ 7 ವಾಗ್ದಾನಗಳು ಹೀಗಿವೆ: ಶೇ.40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್, ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್ ಮತ್ತು ಇ-ಸ್ಕೂಟರ್ ಗಳು, ರೈತರ ಸಾಲ ಸಂಪೂರ್ಣ ಮನ್ನಾ, ಗೋದಿ ಮತ್ತು ಬತ್ತ ಬೆಳೆಗೆ 2,500 ರೂ. ಕನಿಷ್ಟ ಬೆಲೆ(ಎಂ.ಎಸ್.ಪಿ) ನಿಗದಿ, ಸಾಂಕ್ರಾಮಿಕ ಸಮಯದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವವರಿಗೆ ಅರ್ಧ ಮೊತ್ತ ಮನ್ನಾ, ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ 25,000 ರೂ. ಸಹಾಯಧನ, ೨೫ ಲಕ್ಷ ಮಂದಿಗೆ ಸರ್ಕಾರಿ ಉದ್ಯೋಗ.
ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಉತ್ತರ ಪ್ರದೇಶ ಚುನಾವಣೆ; ಯಾರೊಂದಿಗೂ ಮೈತ್ರಿ ಇಲ್ಲ: ಸಲ್ಮಾನ್ ಖುರ್ಷಿದ್
ರೈತರ ಘರ್ಜನೆ ಮುಂದೆ ಬಿಜೆಪಿಯ ಅಧಿಕಾರದ ಮದ ನಿಲ್ಲದು: ಕಿಸಾನ್ ಮಹಾಪಂಚಾಯತ್ ಪರ ಪ್ರಿಯಾಂಕಾ ಗಾಂಧಿ ಬ್ಯಾಟಿಂಗ್
ನೂತನ ಕೃಷಿ ಕಾನೂನುಗಳಿಂದ ಬಿಜೆಪಿಯ ಕೋಟ್ಯಾಧಿಪತಿ ಸ್ನೇಹಿತರಿಗಷ್ಟೇ ಲಾಭ, ರೈತರಿಗಲ್ಲ: ಪ್ರಿಯಾಂಕಾ ಗಾಂಧಿ ವಾದ್ರಾ
ದೇಣಿಗೆ ಹಣ ದುರುಪಯೋಗ ಭಕ್ತರ ನಂಬಿಕೆಗೆ ಮಾಡಿದ ದ್ರೋಹ: ಅಯೋಧ್ಯಾ ಭೂ ಹಗರಣದ ಬಗ್ಗೆ ಪ್ರಿಯಾಂಕಾ ವಾದ್ರಾ ಕಿಡಿ
Advertisement