ಚತ್ತೀಸ್ ಗಢ ಕ್ರೈಸ್ತ ಪಾದ್ರಿ ಮೇಲೆ ಬಲಪಂಥೀಯರ ದಾಳಿ: ಮತಾಂತರ ನಡೆಸುತ್ತಿದ್ದ ಆರೋಪ

ಮತಾಂತರ ಆರೋಪ  ಸಂಬಂಧ ಪೊಲಿಸರು ಹರೀಶ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಪಾದ್ರಿ ಮೇಲೆ ದಾಳಿ ನಡೆಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್ಪುರ: ಮತಾಂತರ ನಡೆಸುತ್ತಿದ್ದ ಅನುಮಾನದ ಮೇರೆಗೆ ಬಲಪಂಥೀಯರ ಗುಂಪೊಂದು ಕ್ರೈಸ್ತ ಪಾದ್ರಿ ಮೇಲೆ ದಾಳಿ ನಡೆಸಿರುವ ಘಟನೆ ರಾಯ್ಪುರದಲ್ಲಿ ನಡೆದಿದೆ. ಪೊಲೀಸ್ ಠಾಣೆಯಲ್ಲಿ ಈ ದಾಳಿ ನಡೆದಿರುವುದು ಅಚ್ಚರಿ. 

ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಹರೀಶ್ ಸಾಹು ಎಂಬ ಪಾದ್ರಿಯ ಮೇಲೆ ಮತಾಂತರ ಆರೋಪ ಹೊರಿಸಿ ಪೊಲೀಸ್ ದೂರು ನೀಡಿದ್ದರು. ಈ ಸಂಬಂಧ ಪೊಲಿಸರು ಹರೀಶ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದರು. 

ಈ ಸಂದರ್ಭ ಅಲ್ಲಿಯೇ ಇದ್ದ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಪಾದ್ರಿ ಮೇಲೆ ದಾಳಿ ನಡೆಸಿದ್ದರು. ದಾಳಿ ಸಂದರ್ಭ ಪಾದ್ರಿ ಜೊತೆಗಿದ್ದ ಇಬ್ಬರು ವ್ಯಕ್ತಿಗಳು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಕ್ರೈಸ್ತ ಪಾದ್ರಿ ಮೇಲೆ ದಾಳಿ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com