ಉತ್ತರ ಪ್ರದೇಶ  ವಿಧಾನಸಬೆ ಚುನಾವಣೆಯಲ್ಲಿ ಮಾಫಿಯಾ ವ್ಯಕ್ತಿಗೆ ಟಿಕೆಟ್ ಇಲ್ಲ: ಮಾಯಾವತಿ

ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮಾಫಿಯಾ ವ್ಯಕ್ತಿಗೆ ಬಿಎಸ್‌ಪಿಯಿಂದ ಟಿಕೆಟ್‌ ಸಿಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಜಿ ಸಿಎಂ ಮಾಯಾವತಿ ತಿಳಿಸಿದ್ದಾರೆ. 
ಮಾಯಾವತಿ
ಮಾಯಾವತಿ

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮಾಫಿಯಾ ವ್ಯಕ್ತಿಗೆ ಬಿಎಸ್‌ಪಿಯಿಂದ ಟಿಕೆಟ್‌ ಸಿಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಜಿ ಸಿಎಂ ಮಾಯಾವತಿ ತಿಳಿಸಿದ್ದಾರೆ. 

ಈ ಸಂಬಂಧ ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು, 'ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮಾಫಿಯಾ ಅಥವಾ ಬಲಿಷ್ಠ ವ್ಯಕ್ತಿಗೆ ಪಕ್ಷದ ಟಿಕೆಟ್ ಸಿಗದಂತೆ ನೋಡಿಕೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.

ಇದೇ ವೇಳೆ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಭೀಮ್ ರಾಜ್‌ಭರ್ ಅವರನ್ನು ಮವು ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು ಎಂದು ಮಾಯಾವತಿ ಘೋಷಿಸಿದ್ದಾರೆ. ಮವು ಕ್ಷೇತ್ರದಿಂದ ಬಿಎಸ್‌ಪಿ ಶಾಸಕರಾಗಿ ಮುಖ್ತಾರ್ ಅನ್ಸಾರಿ ಐದು ಬಾರಿ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ದರೋಡೆ, ಕೊಲೆಯಂತಹ 52 ಗಂಭೀರ ಪ್ರಕರಣಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com